More

    ಪ್ರತಿಯೊಬ್ಬರು ರಾಷ್ಟ್ರಪ್ರೇಮ ಮೈಗೂಡಿಸಿಕೊಳ್ಳಲಿ

    ಅರಕಲಗೂಡು: ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಭಾನುವಾರ ವಿಜಯದಶಮಿ ಪಥಸಂಚಲನ ನಡೆಸಿ ಗಮನ ಸೆಳೆದರು. ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಕೋಟೆ ಕೊತ್ತಲು ಗಣಪತಿ ದೇವಸ್ಥಾನದಿಂದ ಹೊರಟ ಗಣ ವೇಷಧಾರಿಗಳ ಪಥ ಸಂಚಲನ ಪ್ರಮುಖ ಬೀದಿಗಳಲ್ಲಿ ಸಾಗಿತು.

    ಬಳಿಕ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಪ್ರಾಂತ ಸಹ ಸಂಚಾಲಕ ಹೊ.ಸು. ರಮೇಶ್ ಮಾತನಾಡಿ, ಆಧ್ಯಾತ್ಮಿಕತೆಗೆ ಹೆಸರಾದ ಭಾರತದಲ್ಲಿ ಅನೇಕ ಸಂತರು, ಮಹನೀಯರು ತಮ್ಮ ಸಂಸಾರದ ಜಂಜಾಟಗಳನ್ನು ತ್ಯಜಿಸಿ ಸಮಾಜದ ಉನ್ನತಿಗೆ ಬದುಕನ್ನು ಮುಡುಪಾಗಿಟ್ಟಿದ್ದಾರೆ. ಅವರಂತೆಯೇ ಪ್ರತಿಯೊಬ್ಬ ಭಾರತೀಯರು ರಾಷ್ಟ್ರಪ್ರೇಮ ಮೈಗೂಡಿಸಿಕೊಂಡು ದೇಶಕ್ಕಾಗಿ ದುಡಿಯಬೇಕು ಎಂದರು.

    ಸ್ವಾತಂತ್ರ್ಯಕ್ಕಾಗಿ ಆರ್‌ಎಸ್‌ಎಸ್ ಕೊಡುಗೆ ಶೂನ್ಯವೆಂದು ಕೆಲವರು ಹೀಯಾಳಿಸುತ್ತಾರೆ. ಆದರೆ ಆರ್‌ಎಸ್‌ಎಸ್ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವಿಸ್ಮರಣೀಯವಾದ ಹೋರಾಟ ನಡೆಸಿದೆ. ದೇಶದಲ್ಲಿ ಸಜ್ಜನರ ಸಂಖ್ಯೆ ಹೆಚ್ಚಿದ್ದು, ದುರ್ಜನರು ವಿರಳವಾಗಿದ್ದರೂ ಕೆಟ್ಟವರ ಅಟ್ಟಹಾಸ ಮಾತ್ರ ಮಿತಿಮೀರಿದೆ. ಹಿಂದು ಸಮಾಜ ಒಗ್ಗೂಡಿದರೆ ಮಾತ್ರ ಭಾರತವನ್ನು ವಿಶ್ವಗುರುವಾಗಿ ನೋಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಕ್ರೀಯಾಶೀಲವಾಗಿ ಶ್ರಮಿಸಲಿದೆೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts