More

    ಭಕ್ತರಿಗೆ ತಿಳಿಯಲಿ ಧರ್ಮ ಕ್ಷೇತ್ರಗಳ ಮಾಹಿತಿ

    ಉಪ್ಪಿನಬೆಟಗೇರಿ: ಜ್ಞಾನ ಮತ್ತು ವೈರಾಗ್ಯದಲ್ಲಿ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಅವರನ್ನು ಹಾಗೂ ಭಕ್ತಿಯಲ್ಲಿ ಬಸವಣ್ಣನವರನ್ನು ಮೀರಿಸುವವರು ಯಾರೂ ಇಲ್ಲ ಎಂದು ಜಗದ್ಗುರು ಮೂರುಸಾವಿರ ವಿಠಕ್ತಮಠದ ಕುಮಾರ ಶ್ರೀ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

    ಮೂರುಸಾವಿರ ವಿರಕ್ತಮಠದ ಅಕ್ಕನ ಬಳಗ ಹಾಗೂ ಗ್ರಾಮಸ್ಥರು ಕೈಗೊಂಡ ಒಂದು ದಿನದ ಪುಣ್ಯಕ್ಷೇತ್ರಗಳ ದರ್ಶನ ಪ್ರವಾಸದ ಕಾರ್ಯಕ್ರಮದಲ್ಲಿ ಹಾನಗಲ್ಲ ಗುರು ಕುಮಾರೇಶ್ವರರ ದರ್ಶನ ಪಡೆದ ಅವರು ಆಶೀರ್ವಚನ ನೀಡಿದರು.

    ನಮ್ಮ ಧರ್ಮ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ, ಧರ್ಮ ಕ್ಷೇತ್ರಗಳ ಮಹಿಮೆಗಳ ಮಾಹಿತಿ ನಮ್ಮ ಭಕ್ತರಿಗೆ ದೊರಕಲಿ ಎಂಬ ಉದ್ದೇಶದಿಂದ ಪುಣ್ಯಕ್ಷೇತ್ರಗಳ ಪ್ರವಾಸ ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.

    ಅಮಿನಗಡ ಗಚ್ಚಿನಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ, ಘಟಪ್ರಭಾ ಕೆಂಪಯ್ಯಸ್ವಾಮೀಜಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಪ್ರಭುದೇವರು ದಾರ್ಶನಿಕ ಕ್ಷೇತ್ರಗಳ ಮಾರ್ಗದರ್ಶನ ನೀಡಿದರು.

    ಅಕ್ಕನಬಳಗದ ಅಧ್ಯಕ್ಷೆ ಸುನಂದಾ ಮಡಿವಾಳರ, ಅಕ್ಕಮಹಾದೇವಿ ಮಹಿಳಾ ಬ್ಯಾಂಕ್ ಅಧ್ಯಕ್ಷೆ ಅಕ್ಕಮಹಾದೇವಿ ನವಲಗುಂದ, ಕಾರ್ಯದರ್ಶಿ ಕಸ್ತೂರಿ ಯಲಿಗಾರ, ದ್ರಾಕ್ಷಾಯಣಿ ತೊಗ್ಗಿ, ಸುರೇಶಬಾಬು ತಳವಾರ, ಶಿವಪ್ಪ ವಿಜಾಪುರ, ಕಲ್ಲನಗೌಡ ಪಾಟೀಲ, ಶಂಕ್ರಯ್ಯ ಇಂಚಗೇರಿಮಠ ಸೇರಿ ಉಪ್ಪಿನಬೆಟಗೇರಿ, ಹನುಮನಕೊಪ್ಪ ಗ್ರಾಮಗಳ 65ಕ್ಕೂ ಹೆಚ್ಚು ಭಕ್ತರು ಪ್ರವಾಸಕ್ಕೆ ತೆರಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts