More

    ಯುವ ಸಮೂಹಕ್ಕೆ ಅಂಬೇಡ್ಕರ್‌ರ ವಿಚಾರ ತಿಳಿಸುವ ಕೆಲಸವಾಗಲಿ

    ನಂಜನಗೂಡು: ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂದೇಶಗಳನ್ನು ಜನರಿಗೆ ತಲುಪಿಸುವ ಜತೆಗೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟವನ್ನು ಗುರಿಯಾಗಿಸಿಕೊಂಡು ದಸಂಸ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.


    ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಯುವ ಜನತೆಗೆ ತಿಳಿಸುವ ಮೂಲಕ ಅವರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಇಂತಹ ಶಿಬಿರಗಳು ಅಗತ್ಯ ಎಂದರು.


    ಸಮಾರೋಪ ಭಾಷಣ ಮಾಡಿದ ದಸಂಸ ಮುಖಂಡ ದೇವಗಹಳ್ಳಿ ಸೋಮಶೇಖರ್, ಪ್ರಜಾಪ್ರಭುತ್ವಕ್ಕೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಲು ದಸಂಸ ಬಣಗಳು ಹಿಂದಿನಂತೆಯೇ ಬಲಿಷ್ಠವಾಗಬೇಕಿದೆ ಎಂದರು.


    ಇದಕ್ಕೂ ಮೊದಲು ಮೌಢ್ಯ ಮತ್ತು ವಿಜ್ಞಾನ ಎಂಬು ವಿಷಯ ಮಂಡನೆ ಮಾಡಿ ಮಾತನಾಡಿದ ವಿಜ್ಞಾನ ಚಿಂತಕ ಹುಲಿಕಲ್ ನಟರಾಜ್, ಮೌಢ್ಯಗಳನ್ನು ಬಿತ್ತರಿಸುವ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ನಿಯಂತ್ರಣಕ್ಕಾಗಿ ಕಠಿಣ ಕಾನೂನಿನ ಜಾರಿ ಅವಶ್ಯಕ ಎಂದರು.


    ಸಮಾರೋಪದಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಗೋವಿಂದರಾಜು, ನಂಜುಂಡಸ್ವಾಮಿ, ದಸಂಸ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ಶಂಕರಪುರ ಸುರೇಶ್, ಹಗಿನವಾಳು ಚಿಕ್ಕಣ್ಣ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts