ಉಡುಪಿ: ಅರಣ್ಯ ಇಲಾಖೆಯಿಂದ ಮತ್ತೊಂದು ಚಿರತೆ ಸೆರೆಯಾಗಿದ್ದು, ಗ್ರಾಮಸ್ಥರು ನಿರಾಳರಾಗಿದ್ದಾರೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿಯಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಜನವಸತಿ ಪ್ರದೇಶಕ್ಕೆ ಬಂದು ನಿರಂತರವಾಗಿ ಕಾಟ ಕೊಡುತ್ತಿದ್ದ ಚಿರತೆ ಸದ್ಯ ಸೆರೆಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಸಿಬ್ಬಂದಿ ಬೋನು ಇರಿಸಿ ನಾಯಿ ಕಟ್ಟಿದ್ದರು. ನಾಯಿ ತಿನ್ನಲು ಬಂದು ಬೋನಿಗೆ ಸಿಕ್ಕಿಹಾಕಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟದಿಂದ ಮಾಲಾಡಿ ಗ್ರಾಮಸ್ಥರು ಬೇಸತ್ತಿದ್ದರು.
ದಕ್ಷಿಣ ಭಾರತದ ಸಿನಿಮಾಗಳಿಂದ ಬಾಲಿವುಡ್ ನಟರಿಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ: ರಾಮ್ಗೋಪಾಲ್ ವರ್ಮಾ
ಹಣಕ್ಕಾಗಿ ಸರ್ಕಾರಿ ಜಾಬ್ ಮಾರುವ ಗ್ಯಾಂಗ್ಗಳಿಗೆ ಗೃಹ ಸಚಿವರಿಂದ ಖಡಕ್ ಎಚ್ಚರಿಕೆ