More

    ಜನರ ನರಕಯಾತನೆಗೆ ಶಾಸಕರೇ ಹೊಣೆ

    ಗದಗ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೊಳಗಾದ ಗದಗ-ಬೆಟಗೇರಿ ಅವಳಿ ನಗರದ ಮಂಜುನಾಥ ನಗರ ಹಾಗೂ ಭಜಂತ್ರಿ ಓಣಿಗೆ ಬಿಜೆಪಿ ಯುವ ನಾಯಕ ಅನಿಲ ಮೆಣಸಿನಕಾಯಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
    ಬಳಿಕ ಮಾತನಾಡಿದ ಅವರು, ಅವಳಿ ನಗರದ ಬಹುತೇಕ ಕಡೆಗಳಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರಿಂದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಮನೆಯ ಬಾಗಿಲಿಗಿಂತ ಎತ್ತರದಲ್ಲಿ ಸಿಸಿ ರಸ್ತೆಗಳನ್ನು ನಿರ್ವಿುಸಿರುವುದರಿಂದ ಮನೆಯೊಳಗೆ ಮಳೆ ನೀರು ನುಗ್ಗುತ್ತಿದೆ. ಶಾಸಕರ ದೂರದೃಷ್ಟಿಯ ಕೊರತೆ ಹಾಗೂ ನಿಷ್ಕಾಳಜಿಯಿಂದಾಗಿ ಅವಳಿನಗರದ ಜನರು ಇಂದಿಗೂ ಪರಿತಪಿಸುವಂತಾಗಿದೆ. ಆದರೆ, ಈ ಪರಿಸ್ಥಿತಿ ಹುಲಕೋಟಿ ಗ್ರಾಮದಲ್ಲಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
    ರಾಜಕಾಲುವೆಗಳ ಪಕ್ಕ ಮನೆ, ಯಾವುದೇ ಕಟ್ಟಡಗಳನ್ನು ನಿರ್ಮಾಣ ಮಾಡಬಾರದೆಂಬ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಎನ್​ಜಿಟಿ ಆದೇಶವಿದ್ದರೂ ಇಂದಿನ ಶಾಸಕರು ಅಂದು ಬಡವರಿಗೆ ರಾಜ ಕಾಲುವೆಗಳ ಪಕ್ಕ ಮನೆ ನಿರ್ವಿುಸಿಕೊಟ್ಟಿದ್ದಾರೆ. ಸ್ಲಂ ಬೋರ್ಡ್​ನಿಂದ ನಿರ್ವಿುಸಿಕೊಟ್ಟಿರುವ ಕಳಪೆ ಮಟ್ಟದ ಮನೆಗಳ ಮೇಲ್ಛಾವಣಿ ಭಾಗಶಃ ಕುಸಿದು ಬಿದ್ದಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುವಂತಹ ಭಯದ ವಾತಾವರಣ ನಿರ್ವಣವಾಗಿದೆ ಎಂದು ದೂರಿದರು. ಅವಳಿ ನಗರದಲ್ಲಿ ಮುಂಬರುವ ದಿನಗಳಲ್ಲಿ ವೈಜ್ಞಾನಿಕ ರಸ್ತೆ, ಚರಂಡಿ ಹಾಗೂ ಬಡವರಿಗೆ ಸುಸಜ್ಜಿತ ಮನೆಗಳನ್ನು ನಿರ್ವಿುಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಅಧ್ಯಕ್ಷೆ ಉಷಾ ದಾಸರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ನಗರಸಭೆ ಸ್ಥಾಯಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಸದಸ್ಯೆ ಲಕ್ಷ್ಮೀ ಕಾಕಿ, ಮಾಧುಸಾ ಮೇರವಾಡೆ, ಮುಖಂಡರಾದ ದೇವೇಂದ್ರಪ್ಪ ಗೋಟೂರ, ಮಂಜುನಾಥ ತಳವಾರ, ಅಮರೇಶ ಹಿರೇಮಠ, ಶಂಕರ ಕಾಕಿ, ನಿಂಗಪ್ಪ ದೊಡ್ಡಮನಿ, ಚಿನ್ನಪ್ಪ ನೆಗಳೂರ, ಶಿವು ಗೋಟೂರ, ಲಕ್ಷ್ಮಣ ವಾಲ್ಮೀಕಿ, ಮಂಜುನಾಥ ಮಾದಗುಂಡಿ, ಮಾರುತಿ ಅಮರದ, ರಾಮಣ್ಣ ವಾಲ್ಮೀಕಿ, ರಮೇಶ ಕಾತರಕಿ, ಪ್ರಕಾಶ ತಳವಾರ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts