More

    ಮತ್ತೆ ಭೂಕುಸಿತ, ಮಂಗಳೂರು-ಬೆಂಗಳೂರು ರೈಲು ಕೆಲಕಾಲ ಸ್ಥಗಿತ

    ಮಂಗಳೂರು: ಒಂದೆಡೆ ಕುಲಶೇಖರದಲ್ಲಿ ಹಳಿ ದುರಸ್ತಿಯಾಗಿ ರೈಲು ಸಂಚಾರ ಸಾಮಾನ್ಯಗೊಳ್ಳುತ್ತಿರುವಂತೆಯೇ ಪುತ್ತೂರು-ಸುಬ್ರಹ್ಮಣ್ಯ ಮಧ್ಯೆ ವೀರಮಂಗಲ ಎಂಬಲ್ಲಿ ಮಂಗಳೂರು-ಬೆಂಗಳೂರು ರೈಲು ಸಂಚರಿಸುತ್ತಿರುವಾಗಲೇ ಗುಡ್ಡ ಕುಸಿದು ರೈಲಿಗೆ ಹಾನಿ ಉಂಟಾಗಿದೆ.
    ಭಾನುವಾರ ಬೆಳಗ್ಗೆ ಮಂಗಳೂರಿನಿಂದ ಹೊರಟ ರೈಲು ಕಬಕ ಪುತ್ತೂರು ಹಾಗೂ ಸುಬ್ರಹ್ಮಣ್ಯ ಮಧ್ಯೆ ಸಂಚರಿಸುತ್ತಿರುವ ವೇಳೆ ಧರೆ ಕುಸಿದಿದೆ. ರೈಲು ಸುಮಾರು ೪೦ ನಿಮಿಷ ಕಾಲ ಸ್ಥಳದಲ್ಲೇ ಬಾಕಿಯಾಗಿತ್ತು. ದೊಡ್ಡ ಪ್ರಮಾಣದ ಕುಸಿತವಲ್ಲ, ಅಲ್ಲದೆ ರೈಲು ಪೈಲಟ್‌ಗೆ ಮೊದಲೇ ಗೊತ್ತಾದ ಕಾರಣ ರೈಲನ್ನು ಯಶಸ್ವಿಯಾಗಿ ನಿಲ್ಲಿಸಿದ್ದಾರೆ, ಹಾಗಾಗಿ ಯಾವುದೇ ಅನಾಹುತ ಆಗಿಲ್ಲ. ಅಲ್ಲದೆ ರೈಲು ಪ್ರಸ್ತುತ ಪ್ರಯಾಣ ಮುಂದುವರಿಸಿದೆ ಎಂದು ನೈರುತ್ಯ ರೈಲ್ವೇ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ವಿಜಯವಾಣಿಗೆ ಸ್ಪಷ್ಟಪಡಿಸಿದ್ದಾರೆ.

    ಕಳೆದ ನಾಲ್ಕು ದಿನಗಳಿಂದ ಕರಾವಳಿಯಲ್ಲಿ ತೀವ್ರ ಮಳೆಯಾಗುತ್ತಿದ್ದು ಅಲ್ಲಲ್ಲಿ ಭೂಕುಸಿತ ಶುರುವಾಗಿದೆ. ಶುಕ್ರವಾರವಷ್ಟೇ ಮಂಗಳೂರಿನ ಕುಲಶೇಖರದಲ್ಲಿ ಭೂಕುಸಿತದಿಂದ ರೈಲು ಸಂಚಾರ ಸ್ಥಗಿತಗೊಂಡಿದ್ದು ಭಾನುವಾರ ಬೆಳಗ್ಗೆಯಷ್ಟೇ ದುರಸ್ತಿಯಾಗಿತ್ತು.

    ಮತ್ತೆ ಭೂಕುಸಿತ, ಮಂಗಳೂರು-ಬೆಂಗಳೂರು ರೈಲು ಕೆಲಕಾಲ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts