ರಾಂಚಿ: ಬಿಹಾರದಲ್ಲಿ ಎನ್ಡಿಎ ಮುನ್ನುಗ್ಗುತ್ತಿದ್ದು, ಮಗಾಘಟ್ಬಂಧನ್ ಹಿನ್ನಡೆ ಸಾಧಿಸಿದೆ.
ಆಸ್ಪತ್ರೆಯಲ್ಲಿದ್ದುಕೊಂಡು ಬೆಳಗ್ಗೆಯಿಂದಲೇ ಟಿವಿಯಲ್ಲಿ ಚುನಾವಣಾ ಫಲಿತಾಂಶ ವೀಕ್ಷಣೆ ಮಾಡುತ್ತಿದ್ದ ರಾಷ್ಟ್ರೀಯ ಜನತಾ ದಳ್ (ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಎನ್ಡಿಎ ಮುನ್ನಡೆಯೆಂಬ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಟಿವಿ ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಸ್ಪರ್ಧಿಗಳು ಮುನ್ನಡೆಯಲ್ಲಿದ್ದಾರೆ ಎಂಬ ಸುದ್ದಿಯಿಂದ ಕಿರಿಕಿರಿಗೆ ಒಳಗಾದ ಲಾಲೂ ಪ್ರಸಾದ್ ಯಾದವ್ ಅವರು, ಟಿವಿ ಆಫ್ ಮಾಡಿ, ಆಸ್ಪತ್ರೆಯ ಲಾನ್ನಲ್ಲಿ ಸೂರ್ಯನಿಗೆ ಮೈಯೊಡ್ಡಿ ಕುಳಿತಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಮಹಾಘಟ್ಬಂಧನ್ದ ಮುಖ್ಯಮಂತ್ರಿ ಅಭ್ಯರ್ಥಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಆಗಿದ್ದರು. ಈ ಬಾರಿ ಎನ್ಡಿಎ ಮೈತ್ರಿಕೂಟವನ್ನು ಸೋಲಿಸಿಯೇ ತೀರುತ್ತೇವೆ ಎಂದು ಹೇಳಿದ್ದರು. ಸದ್ಯದ ಎಣಿಕೆಯ ಅನ್ವಯ ಬಿಹಾರದಲ್ಲಿ ಎನ್ಡಿಎ ಅಲೆಯಿದ್ದು, ಸಂಜೆಯವರೆಗೂ ಎಣಿಕೆ ಮುಂದುವರಿಯಲಿದೆ. (ಏಜೆನ್ಸೀಸ್)