ನವದೆಹಲಿ: ಚೀನಾ ತನ್ನ ಗಡಿ ಭಾಗಕ್ಕೆ ಅಂಟಿಕೊಂಡಿರುವ ಲಡಾಖ್ನ ಜನತೆಯನ್ನು ಹೆದರಿಸಿ ಬೆದರಿಸಿ ಅವರ ಭೂಮಿಗಳನ್ನು ಕಿತ್ತುಕೊಂಡಿದೆ. ಇವರ ಬೆದರಿಕೆಗೆ ಮಣಿದು ಕೆಲವರು ಭೂಮಿ, ಮನೆಗಳನ್ನು ತೊರೆದು ನಗರಗಳಿಗೆ ವಲಸೆ ಹೋಗಿದ್ದಾರೆ. ಇನ್ನಾದರೂ ಅವರ ಎಚ್ಚರಿಕೆಯ ಮಾತುಗಳನ್ನು ಆಲಿಸಿ. ಇಲ್ಲವಾದಲ್ಲಿ ಅಪಾಯ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಚೀನಿಯರು ಲಡಾಖಿಗಳ ಭೂಮಿಯನ್ನು ಕಸಿದುಕೊಂಡಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನೂ ಅವರು ಉಲ್ಲೇಖಿಸಿದ್ದಾರೆ.
ದೇಶಭಕ್ತ ಲಡಾಖ್ ಜನತೆ ಚೀನಾದ ಅತಿಕ್ರಮಣದ ಬಗ್ಗೆ ಧ್ವನಿಎತ್ತುತ್ತಿದ್ದಾರೆ. ಅವರು ಗಟ್ಟಧ್ವನಿಯಲ್ಲಿ ಅಪಾಯದ ಮುನ್ಸೂಚನೆ ನೀಡುತ್ತಿದ್ದಾರೆ. ಇದನ್ನು ನಿರ್ಲಕ್ಷಿಸಿದರೆ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ: ಕ್ಸಿ ಜಿನ್ಪಿಂಗ್ ಪ್ರವಾಸವನ್ನು ರದ್ದುಗೊಳಿಸಿದರೇ ಶಿನ್ಜೋ ಅಬೆ?
ಇದಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಲಡಾಖ್ ನಿವಾಸಿಗಳು ತಮ್ಮ ತಮ್ಮ ತಾಯಿ ನಾಡನ್ನು ತುಂಬಾ ಪ್ರೀತಿಸುತ್ತಾರೆ. ಚೀನಾದವರು ಅವರೆಲ್ಲರ ಭೂಮಿಯನ್ನು ಅತಿಕ್ರಮಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ತಾಯಿ ನಾಡಿನ ರಕ್ಷಣೆ ಹಾಗೂ ಒಟ್ಟಾರೆ ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರ ಭಾವುಕ ಲಡಾಖಿಗಳ ಮಾತುಗಳನ್ನು ಆಲಿಸುವ ನಿರೀಕ್ಷೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.
ಚೀನಾದವರು ತಮ್ಮ ಭೂಮಿಯನ್ನು ಅತಿಕ್ರಮಿಸಿದ್ದಾರೆ ಎಂದು ಲಡಾಖ್ನ ನಿವಾಸಿಯೊಬ್ಬರು ಹೇಳಿರುವ ವಿಡಿಯೋ ತುಣುಕನ್ನು ಅವರು ತಮ್ಮ ಟ್ವೀಟ್ಗೆ ಲಗತ್ತಿಸಿದ್ದಾರೆ.
ಐಎಸ್ಐ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು!