More

    ಕುರುಬರ ಸಂಘದ ಅಧ್ಯಕ್ಷರಾಗಿ ಕೆ.ಗುರುಪಾದಪ್ಪ ಆಯ್ಕೆ

    ಸಂಡೂರು: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕೆ.ಗುರುಪಾದಪ್ಪ ಆಯ್ಕೆಯಾದರು.

    ಕೆ.ಸತ್ಯಪ್ಪ(ಗೌ.ಅಧ್ಯಕ್ಷ), ಕೆ.ವಿ.ವೀರಣ್ಣ(ಕಾರ್ಯಾಧ್ಯಕ್ಷ), ವಣಿಕೇರಿ ಸುರೇಶ್ (ಪ್ರಧಾನ ಕಾರ್ಯದರ್ಶಿ) , ವಣಿಕೇರಿ ರವಿಕುಮಾರ್(ಖಜಾಂಚಿ), ಕೊಂಡಾಪುರ ಕುಮಾರಸ್ವಾಮಿ, ಕಾಶಿ ತಿಪ್ಪೇಸ್ವಾಮಿ, ತಾಯಪ್ಪ ವಿಠಲಾಪುರ, ರುದ್ರಪ್ಪ ಕೃಷ್ಣನಗರ(ಉಪಾಧ್ಯಕ್ಷರು), ತಿಪ್ಪೇಸ್ವಾಮಿ, ಮಾರುತಿ (ಸಹ ಕಾರ್ಯದರ್ಶಿಗಳು), ರಾಮು ಅರಕೇರಿ, ಈಶ್ವರ್ ಒಡೆಯರ್, ಜಿ.ಟಿ.ಮಹಾಂತೇಶ್, ಗಿರೇನಹಳ್ಳಿ, ಗಾದಿಲಿಂಗಪ್ಪ(ಸಂಘಟನಾ ಕಾರ್ಯದರ್ಶಿಗಳು), ಬಿ.ಎಂ.ಪ್ರಕಾಶ್ (ಸಾಂಸ್ಕೃತಿಕ ಕಾರ್ಯದರ್ಶಿಗಳು) ಅವರು ಆಯ್ಕೆಯಾಗಿದ್ದಾರೆ.


    ಸಂಘದ ಗೌರವ ಅಧ್ಯಕ್ಷ ಕೆ.ಸತ್ಯಪ್ಪ ಅವರು ಮಾತನಾಡಿ, ನೂತನ ಪದಾಧಿಕಾರಿಗಳು ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ದೂರದೃಷ್ಟಿಯಿಂದ ಯೋಜನೆ ರೂಪಿಸಿ ಕೆಲಸ ಮಾಡಲಿ. ಕುರುಬರ ಸಂಘವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಸರ್ಕಾರ ಕೂಡಲೇ ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.


    ನೂತನ ಅಧ್ಯಕ್ಷ ಗುರುಪಾದಪ್ಪ ಮಾತನಾಡಿ, ಈ ಬಾರಿಯ ಪದಾಧಿಕಾರಿಗಳಲ್ಲಿ ಯುವಕರೇ ಇದ್ದಾರೆ. ಸಮಾಜದ ಕೆಲಸಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಕುರುಬ ಸಂಘವನ್ನು ಮುಂದುವರಿಸಿಕೊಂಡು ಹೋಗಲು ಸಹಕಾರ ನೀಡಬೇಕೆಂದರು.


    ಹಾಲುಮತ ಸಮಾಜದ ಅಧ್ಯಕ್ಷ ಕೆ.ಜೆ.ಶಿವಕುಮಾರ್, ಉಪಾಧ್ಯಕ್ಷ ದಮ್ಮೂರೇಶ್, ಮುಖಂಡರಾದ ದೇವೇಂದ್ರಪ್ಪ, ವಡ್ಡಿನ ವಸಿಗೇರಪ್ಪ, ಸೋವೇನಹಳ್ಳಿ ಶಿವರಾಮ್, ನೀಲಕಂಠ, ಅಂತಾಪುರ ಶಂಕ್ರಪ್ಪ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts