ಕುಮಟಾ: ಪಟ್ಟಣದ ಗ್ರಾಮದೇವಿ ಭೂಮಿದೇವತೆ ಅಮ್ಮನವರೆಂದೇ ಖ್ಯಾತವಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ವಾರ್ಷಿಕ ಬಂಡಿಹಬ್ಬ ವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಏ. 25ರಿಂದ ಆರಂಭವಾದ ಬಂಡಿಹಬ್ಬದ ವಿವಿಧ ಕಾರ್ಯಕ್ರಮಗಳಲ್ಲಿ ಕಲಶಕಟ್ಟುವಿಕೆಯಿಂದ ಶುರುವಾಗಿ ಮಾರಿಕಾಂಬೆಯ ಆಹ್ವಾನ, ಉತ್ಸವ, ಹಗರಣ, ನಗರೋತ್ಸವದೊಟ್ಟಿಗೆ ಕಲಶಗಳು, ಮುಖವಾಡ ಕುಣಿತದೊಂದಿಗೆ ಜರುಗಿತು. ಕಲಶದ ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ಕಲಶಕ್ಕೆ ಕಾಣಿಕೆ ಸಮರ್ಪಿಸಿದರು. ರಾತ್ರಿ ಕಲಶದವರೊಟ್ಟಿಗೆ, ಕಟ್ಟಿಗೆಯವರು ದೇವಪಾತ್ರಧಾರಿಗಳು ಕೆಂಡ ಹಾಯುವ ಸನ್ನಿವೇಶ ಭಕ್ತರನ್ನು ರೋಮಾಂಚನಗೊಳಿಸಿತು. ದೇವಾಲಯದ ಅರ್ಚಕ ಗುನಗರು, ಮೊಕ್ತೇಸರ ಕೃಷ್ಣ ಪೈ ಹಾಗೂ ಆಡಳಿತ ಮಂಡಳಿಯವರು ಬಂಡಿಹಬ್ಬದ ಯಶಸ್ಸಿಗೆ ಶ್ರಮಿಸಿದರು.
ಶಾಂತಿಕಾ ಪರಮೇಶ್ವರಿದೇವಿ ಬಂಡಿಹಬ್ಬ
ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test
Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…
ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti
ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…
ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ| Health Tips
ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…