ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ರಾತ್ರಿವೇಳೆ ಮತ್ತು ಭಾನುವಾರವೂ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳು ಸಂಚರಿಸಲಿವೆ.
ಕರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಘೋಷಿಸಿದ್ದ ಸಂಡೇ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ಅನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಹಾಗಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳು ನಿರ್ಬಂಧವಿಲ್ಲದೆ ಸೇವೆ ನೀಡಲಿವೆ.
ಇದನ್ನೂ ಓದಿರಿ ಅಂಬೇಡ್ಕರ್ಗೆ ಊಟ ಬಡಿಸಿದ್ದ ಬೆಳಗಾವಿಯ ಅಜ್ಜಿ ಸಿದ್ದವ್ವ ಮೇತ್ರಿ ನಿಧನ
ಕರೊನಾ ಸೋಂಕು ಹರಡುವ ಭೀತಿಯಿಂದಾಗಿ ರಾಜ್ಯ ಸರ್ಕಾರ ರಾತ್ರಿ 9ರಿಂದ ಬೆಳಗಿನಜಾವ 5ರ ವರೆಗೆ ಹಾಗೂ ಭಾನುವಾರ ಇಡೀ ದಿನ ಕರ್ಫ್ಯೂ ಹೇರಿತ್ತು. ಕರ್ಫ್ಯೂ ಇದ್ದ ಸಂದರ್ಭದಲ್ಲಿ ಸಾರಿಗೆ ಬಸ್ಗಳ ಸಂಚಾರ ಇರುತ್ತಿರಲಿಲ್ಲ. ಆದರೀಗ, ಎಲ್ಲ ರೀತಿಯ ಕರ್ಫ್ಯೂ ತೆರವು ಮಾಡಿದ ಹಿನ್ನೆಲೆಯಲ್ಲಿ ಈ ಹಿಂದಿನಂತೆ ಬಸ್ಗಳು ಸಂಚರಿಸಲಿವೆ.
ಬೆಂಗಳೂರು, ಮೈಸೂರು ಸೇರಿ ರಾಜ್ಯದ ಎಲ್ಲೆಡೆಯೂ ರಾತ್ರಿ ಬಸ್ ಸಂಚಾರ ಇರಲಿದೆ. ಬಿಎಂಟಿಸಿ ಕೂಡ ರಾತ್ರಿ ಸೇವೆಯನ್ನು ಮುಂದುವರಿಸಲಿದ್ದು, ರಾತ್ರಿ 11 ಗಂಟೆವರೆಗೂ ಸೇವೆ ನೀಡುವ ಸಾಧ್ಯತೆಗಳಿವೆ.
ಎರಡೂ ನಿಗಮಗಳು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಿವೆ. ಅದರಂತೆ ಕೆಎಸ್ಆರ್ಟಿಸಿಯಿಂದ 4 ಸಾವಿರ ಮತ್ತು ಬಿಎಂಟಿಸಿಯ 3 ಸಾವಿರ ಬಸ್ಗಳು ಸಂಚರಿಸಲಿವೆ.
ಹಳೇ ಲವ್ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!