ಮಂಡ್ಯ: ಕೆಆರ್ಎಸ್ ಅಣೆಕಟ್ಟೆಯಲ್ಲಿ ಸರ್ಕಾರಿ ಜೀಪ್ ಅನ್ನು ಖಾಸಗಿ ಯುವಕ ಚಾಲನೆ ವಿವಾದ ಮಾಸುವ ಮುನ್ನವೇ ಶುಕ್ರವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಸದಸ್ಯರು ತಮ್ಮ ಕುಟುಂಬದೊಂದಿಗೆ ಜಲಾಶಯದ ಹಿನ್ನೀರಿನಲ್ಲಿ ಮೋಜು-ಮಸ್ತಿ ಮಾಡಿರುವುದು ಟೀಕೆಗೆ ಗುರಿಯಾಗಿದೆ.
ಡ್ಯಾಂನ ಉತ್ತರ ಪ್ರವೇಶದ್ವಾರದ ಹಿನ್ನೀರಿನಲ್ಲಿ ಮತ್ತು ನೀರಿನಿಂದ ಸುಮಾರು 200 ಮೀ. ದೂರದಲ್ಲಿಯೇ ಶಾಮಿಯಾನ ಹಾಕಿಕೊಂಡು ಭೋಜನಕೂಟ, ಕ್ವಿಜ್, ಆಟೋಟ ಸ್ಪರ್ಧೆ ಮಾಡಲಾಗಿದೆ. 120ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದಾರೆ. ಡಿಜೆ ಹಾಕಿಕೊಂಡು ಮಾಡಿರುವ ಪಾರ್ಟಿಗೆ ಸ್ಥಳೀಯ ಅಧಿಕಾರಿಗಳು ಬ್ರೇಕ್ ಹಾಕದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿರಿ ಕೆಆರ್ಎಸ್ ಡ್ಯಾಂ ಮೇಲೆ ನಿಷೇಧವಿದ್ದರೂ ಪೊಲೀಸ್ ಜೀಪ್ನಲ್ಲೇ ದರ್ಬಾರ್ ನಡೆಸಿದ ಯುವಕ!
ಪಾರ್ಟಿ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅಕಾಡೆಮಿ ಅಧಿಕಾರಿ ಸುಮನಾ, ನಾವು ಹಿನ್ನೀರಿನ ಬಳಿ ಅನಧಿಕೃತ ಚಟುವಟಿಕೆ ಮಾಡುತ್ತಿಲ್ಲ. ಕುಟುಂಬದ ಸದಸ್ಯರೊಂದಿಗೆ ಒಂದಿಷ್ಟು ಸಮಯ ಕಳೆಯಲು ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.
ಅಧಿಕಾರ ದುರುಪಯೋಗ?: ಸಾಮಾನ್ಯವಾಗಿ ಡ್ಯಾಂ ಹಿನ್ನೀರಿನಲ್ಲಿ ಪಾರ್ಟಿ ಮಾಡುವುದು ಇರಲಿ, ನಡೆದಾಡುವುದಕ್ಕೂ ಅವಕಾಶವಿಲ್ಲ. ಅದು ನಿರ್ಬಂಧಿತ ಪ್ರವೇಶ. ಹೀಗಿರುವಾಗ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಮೂಲಕ ತಮಗಿಷ್ಟ ಬಂದಂತೆ ನಿಯಮ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯರಿಗೆ ಒಂದು ನ್ಯಾಯ, ಅಧಿಕಾರಿಗಳಿಗೆ ಒಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಹಿಂದೆ ಇದೇ ಪ್ರದೇಶದ ವ್ಯಾಪ್ತಿಯಲ್ಲಿ ಕೆಲವರು ಪಾರ್ಟಿ ಮಾಡಿದಾಗ ಆಯೋಜಕರು ಹಾಗೂ ಭಾಗವಹಿಸಿದವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಇದೀಗ ಡ್ಯಾಂನ ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ಮಾಡಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ವಿರುದ್ಧವೂ ದೂರು ದಾಖಲಿಸಿ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಕೆಆರ್ಎಸ್ ಹಿನ್ನೀರಿನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದಾರೆನ್ನುವ ವಿಷಯದ ಬಗ್ಗೆ ವರದಿ ಸಲ್ಲಿಸುವಂತೆ ಅಪರ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್ಗೆ ತಿಳಿಸಲಾಗಿದೆ.
| ಎಸ್.ಅಶ್ವಥಿ ಜಿಲ್ಲಾಧಿಕಾರಿ
ಹಾಡಹಗಲೇ ಕೋರ್ಟ್ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ
ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್ ಸಿಬ್ಬಂದಿ ಧಮ್ಕಿ!