More

    ನಾನು ಮಾತಾಡಿದ್ದು ಆ ಗೋವಿಂದ ಬಗ್ಗೆ ಅಲ್ಲ … ಉಲ್ಟಾ ಹೊಡೆದ ಕೆಆರ್​ಕೆ

    ಮುಂಬೈ: ಸಲ್ಮಾನ್​ ಖಾನ್​ ಜತೆಗಿನ ಕಿತ್ತಾಟದಲ್ಲಿ ತಮ್ಮ ಪರವಾಗಿ ಗೋವಿಂದ ಇದ್ದಾರೆ ಎಂದು ಕೆಆರ್​ಕೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಆದರೆ, ಇದೀಗ ಅವರು ಉಲ್ಟಾ ಹೊಡೆದಿದ್ದಾರೆ. ತಾನು ಹೇಳಿದ್ದು ಬಾಲಿವುಡ್​ ನಟ ಗೋವಿಂದ ಬಗ್ಗೆ ಅಲ್ಲ, ತಮ್ಮ ಸ್ನೇಹಿತ ಗೋವಿಂದನ ಬಗ್ಗೆ ಎಂದು ತಿಪ್ಪೆ ಸಾರಿಸಿದ್ದಾರೆ.

    ಇದನ್ನೂ ಓದಿ: ಓಟಿಟಿಯಲ್ಲಿ ‘ಜಗಮೇ ತಂಧಿರಮ್’ ಬಿಡುಗಡೆಯಾಗುತ್ತಿರುವ ಬಗ್ಗೆ ಧನುಷ್​ ಬೇಸರ

    ರಾಧೇ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಿಕ್ಕೆ, ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕೆಆರ್​ಕೆ ಮೇಲೆ ಸಲ್ಮಾನ್​ ಖಾನ್​ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಂಥ ಸಂದರ್ಭದಲ್ಲಿ ಗೋವಿಂದ ಸೇರಿದಂತೆ ಬಾಲಿವುಡ್​ನ ಹಲವು ನಟರು ತಮ್ಮ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದರು. ಸಲ್ಮಾನ್​ ಮತ್ತು ಗೋವಿಂದ ನಡುವೆ ಮೊದಲೇ ಕೆಲವು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈಗ ಕೆಆರ್​ಕೆ ಪರವಾಗಿ ನಿಲ್ಲುವ ಮೂಲಕ ಗೋವಿಂದ, ಸಲ್ಮಾನ್​ ಅವರ ಜತೆಗೆ ನೇರವಾಗಿ ಯುದ್ಧಕ್ಕೆ ಇಳಿದಿದ್ದಾರೆ ಎಂಬ ಪ್ರಶ್ನೆ ಬಾಲಿವುಡ್​ ವಲಯದಲ್ಲಿ ಕೇಳಿಬಂದಿತ್ತು.

    ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೋವಿಂದ, ಕೆಆರ್​ಕೆ ಜತೆಗೆ ಹಲವು ವರ್ಷಗಳಿಂದ ಸಂಪರ್ಕವೇ ಇಲ್ಲ ಎಂದು ಹೇಳಿದ್ದರು. ‘ನಾನು ಕೆಆರ್​ಕೆ ಜತೆಗೆ ಮಾತನಾಡಿಯೇ ಎಷ್ಟೋ ವರ್ಷಗಳಾಗಿವೆ. ಯಾವುದೇ ಮೀಟಿಂಗ್ ಇಲ್ಲ, ಫೋನ್​ ಕಾಲ್​ ಇಲ್ಲ, ಕೊನೆ ಪಕ್ಷ ಮೆಸೇಜ್​ ಕೂಡಾ ಹಾಕಿಲ್ಲ. ಬಹುಶಃ ಬೇರೆ ಯಾರೋ ಗೋವಿಂದ ಎನ್ನುವವರು ಕೆಆರ್​ಕೆ ಸಪೋರ್ಟ್​ ಕೊಟ್ಟಿರಬೇಕು. ಅದೇ ಕಾರಣಕ್ಕೆ, ಕೆಆರ್​ಕೆ ತಮ್ಮ ಟ್ವೀಟ್​ನಲ್ಲಿ ನನ್ನ ಹೆಸರನ್ನು ಟ್ಯಾಗ್​

    ಇದನ್ನೂ ಓದಿ: ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್‌ ತಾರೆ…

    ಯಾವಾಗ ಗೋವಿಂದ ತಮ್ಮ ವಿರುದ್ಧ ತಿರುಗಿಬಿದ್ದರೋ, ಕೆಆರ್​ಕೆ ಉಲ್ಟಾ ಹೊಡೆದಿದ್ದಾರೆ. ತಾನು ಮಾತನಾಡಿದ್ದು ಬಾಲಿವುಡ್​ ನಟ ಗೋವಿಂದ ಬಗ್ಗೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ನನಗೆ ಸಪೋರ್ಟ್​ ಮಾಡಿದ್ದು ಆ ನಟ ಗೋವಿಂದ ಅಲ್ಲ, ನನ್ನ ಸ್ನೇಹಿತ ಗೋವಿಂದನ ಬಗ್ಗೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಮಾಧ್ಯಮದವರು ಸುದ್ದಿ ಮಾಡಿದರೆ ನಾನೇನು ಮಾಡಲಿ?’ ಎಂದು ಕೆಆರ್ಕೆ ಪ್ರಶ್ನಿಸಿದ್ದಾರೆ.

    ಬಾಲಿವುಡ್​ನಲ್ಲಿ ಇನ್ನೊಂದು ‘ಪ್ರೇಮ್​ ಕಹಾನಿ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts