ಮುಂಬೈ: ಸಲ್ಮಾನ್ ಖಾನ್ ಜತೆಗಿನ ಕಿತ್ತಾಟದಲ್ಲಿ ತಮ್ಮ ಪರವಾಗಿ ಗೋವಿಂದ ಇದ್ದಾರೆ ಎಂದು ಕೆಆರ್ಕೆ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಆದರೆ, ಇದೀಗ ಅವರು ಉಲ್ಟಾ ಹೊಡೆದಿದ್ದಾರೆ. ತಾನು ಹೇಳಿದ್ದು ಬಾಲಿವುಡ್ ನಟ ಗೋವಿಂದ ಬಗ್ಗೆ ಅಲ್ಲ, ತಮ್ಮ ಸ್ನೇಹಿತ ಗೋವಿಂದನ ಬಗ್ಗೆ ಎಂದು ತಿಪ್ಪೆ ಸಾರಿಸಿದ್ದಾರೆ.
ಇದನ್ನೂ ಓದಿ: ಓಟಿಟಿಯಲ್ಲಿ ‘ಜಗಮೇ ತಂಧಿರಮ್’ ಬಿಡುಗಡೆಯಾಗುತ್ತಿರುವ ಬಗ್ಗೆ ಧನುಷ್ ಬೇಸರ
ರಾಧೇ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದಿಕ್ಕೆ, ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕ ಕೆಆರ್ಕೆ ಮೇಲೆ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇಂಥ ಸಂದರ್ಭದಲ್ಲಿ ಗೋವಿಂದ ಸೇರಿದಂತೆ ಬಾಲಿವುಡ್ನ ಹಲವು ನಟರು ತಮ್ಮ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದರು. ಸಲ್ಮಾನ್ ಮತ್ತು ಗೋವಿಂದ ನಡುವೆ ಮೊದಲೇ ಕೆಲವು ವರ್ಷಗಳಿಂದ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈಗ ಕೆಆರ್ಕೆ ಪರವಾಗಿ ನಿಲ್ಲುವ ಮೂಲಕ ಗೋವಿಂದ, ಸಲ್ಮಾನ್ ಅವರ ಜತೆಗೆ ನೇರವಾಗಿ ಯುದ್ಧಕ್ಕೆ ಇಳಿದಿದ್ದಾರೆ ಎಂಬ ಪ್ರಶ್ನೆ ಬಾಲಿವುಡ್ ವಲಯದಲ್ಲಿ ಕೇಳಿಬಂದಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೋವಿಂದ, ಕೆಆರ್ಕೆ ಜತೆಗೆ ಹಲವು ವರ್ಷಗಳಿಂದ ಸಂಪರ್ಕವೇ ಇಲ್ಲ ಎಂದು ಹೇಳಿದ್ದರು. ‘ನಾನು ಕೆಆರ್ಕೆ ಜತೆಗೆ ಮಾತನಾಡಿಯೇ ಎಷ್ಟೋ ವರ್ಷಗಳಾಗಿವೆ. ಯಾವುದೇ ಮೀಟಿಂಗ್ ಇಲ್ಲ, ಫೋನ್ ಕಾಲ್ ಇಲ್ಲ, ಕೊನೆ ಪಕ್ಷ ಮೆಸೇಜ್ ಕೂಡಾ ಹಾಕಿಲ್ಲ. ಬಹುಶಃ ಬೇರೆ ಯಾರೋ ಗೋವಿಂದ ಎನ್ನುವವರು ಕೆಆರ್ಕೆ ಸಪೋರ್ಟ್ ಕೊಟ್ಟಿರಬೇಕು. ಅದೇ ಕಾರಣಕ್ಕೆ, ಕೆಆರ್ಕೆ ತಮ್ಮ ಟ್ವೀಟ್ನಲ್ಲಿ ನನ್ನ ಹೆಸರನ್ನು ಟ್ಯಾಗ್
ಇದನ್ನೂ ಓದಿ: ಎರಡನೇ ಮಗುವಾದ ಮೇಲೂ ಕರೀನಾ ಹೀಗಿದ್ದಾರೆ ನೋಡಿ- ಫೋಟೋ ಹಂಚಿಕೊಂಡ ಬಾಲಿವುಡ್ ತಾರೆ…
ಯಾವಾಗ ಗೋವಿಂದ ತಮ್ಮ ವಿರುದ್ಧ ತಿರುಗಿಬಿದ್ದರೋ, ಕೆಆರ್ಕೆ ಉಲ್ಟಾ ಹೊಡೆದಿದ್ದಾರೆ. ತಾನು ಮಾತನಾಡಿದ್ದು ಬಾಲಿವುಡ್ ನಟ ಗೋವಿಂದ ಬಗ್ಗೆ ಅಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನಗೆ ಸಪೋರ್ಟ್ ಮಾಡಿದ್ದು ಆ ನಟ ಗೋವಿಂದ ಅಲ್ಲ, ನನ್ನ ಸ್ನೇಹಿತ ಗೋವಿಂದನ ಬಗ್ಗೆ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಮಾಧ್ಯಮದವರು ಸುದ್ದಿ ಮಾಡಿದರೆ ನಾನೇನು ಮಾಡಲಿ?’ ಎಂದು ಕೆಆರ್ಕೆ ಪ್ರಶ್ನಿಸಿದ್ದಾರೆ.