ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ(ಎಫ್ಡಿಎ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇಂದು(ಜ.24) ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ನಿನ್ನೆಯೇ ಸೋರಿಕೆ ಆಗಿದ್ದು, ಎಕ್ಸಾಂ ಮುಂದೂಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ, ಎಫ್ಡಿಎ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದೇ ಕೆಪಿಎಸ್ಸಿ ಸಿಬ್ಬಂದಿ! ಆ ಕಿಂಗ್ಪಿನ್ನ ಕರಾಳ ಮುಖವನ್ನ ನಾವಿಲ್ಲಿ ಬಿಚ್ಚಿಡ್ತೀವಿ ನೋಡಿ.
ಪ್ರಶ್ನೆಪತ್ರಿಕೆ ಲೀಕ್ ಆಗಿರೋ ಮಾಹಿತಿ ನೋಡಿದ್ರೆ ಇಡೀ ವ್ಯವಸ್ಥೆಯೇ ಬೆಚ್ಚಿಬೀಳುತ್ತೆ. ಪ್ರಶ್ನೆಪತ್ರಿಕೆ ಸಿದ್ಧವಾದ ಜಾಗದಿಂದಲೇ ಸೋರಿಕೆಗೆ ಭಾರಿ ಪಿತೂರಿ ನಡೆದಿದ್ದು, ಲೀಕಾಸುರನ ಹಿಂದಿದೆ ಭಯಾನಕ ಜಾಲ. ಈ ಪ್ರಕರಣ ಸಂಬಂಧ ಇದುವರೆಗೂ 14 ಮಂದಿಯನ್ನ ಸಿಸಿಬಿ ಬಂಧಿಸಿದೆ ಎಂದು ಮೂಲಗಳು ತಿಳಿಸಿದ್ದು, ಸಿಸಿಬಿ ತನಿಖೆ ವೇಳೆ ಆ ಮಾಸ್ಟರ್ ಮೈಂಡ್ನ ಮಾಹಿತಿ ಸಿಕ್ಕಿದೆ. ಅಂದಹಾಗೆ ಆ ಕಿಂಗ್ಪಿನ್ ಬೇರೆ ಯಾರೂ ಅಲ್ಲ, ಕೆಪಿಎಸ್ಸಿ ಕಚೇರಿಯಲ್ಲಿ ಕೆಲಸ ಮಾಡುವ ಓರ್ವ ಆಫೀಸರ್! ಇದನ್ನೂ ಓದಿರಿ ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…
ತನಿಖಾ ದೃಷ್ಟಿಯಿಂದ ಆ ಕಿಂಕ್ಪಿನ್ ಆಫೀಸರ್ ಹೆಸರನ್ನು ನಾವು ಬಹರಂಗ ಪಡಿಸಲ್ಲ. ಆದರೇ ಆ ಅಧಿಕಾರಿಯೇ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ್ದು. ಆ ಅಧಿಕಾರಿ ಕಚೇರಿಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರತಂದು ಆರೋಪಿ ಚಂದ್ರುಗೆ ನೀಡಿದ್ದ. ಬಳಿಕ ಚಂದ್ರು ಅವುಗಳನ್ನು ಉಲ್ಲಾಳದ ಆರ್.ಆರ್. ರೆಸಿಡೆನ್ಸಿಯ ಫ್ಲಾಟ್ನಲ್ಲಿಟ್ಟಿದ್ದ. ನಂತರ ತಮ್ಮ ಪ್ಲಾನ್ನಂತೆ ಇನ್ನುಳಿದ ರಾಜ್ಯದ ವಿವಿಧೆಡೆಯ ಮೀಡಿಯೇಟರ್ಸ್ಗೆ ಸಪ್ಲೈ ಮಾಡಲು ಸ್ಕೆಚ್ ಹಾಕಿದ್ದ. ಒಂದು ಕಡೆ ಈ ಗ್ಯಾಂಗ್ ಸದ್ದಿಲ್ಲದೇ ಪರೀಕ್ಷಾರ್ಥಿಗಳ ಆಪರೇಶನ್ಗೆ ಕೈ ಹಾಕಿತ್ತು. ಮತ್ತೊಂದು ಕಡೆ ತಮಗಿದ್ದ ಇನ್ಫಾರ್ಮೇಶನ್ ಮೇರೆಗೆ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು, ಉಲ್ಲಾಳದ ಫ್ಲಾಟ್ ಮೇಲೆ ದಾಳಿ ಮಾಡುತ್ತಿದ್ದಂತೆ ರೆಡ್ಹ್ಯಾಂಡ್ ಆಗಿ ಪ್ರಶ್ನೆಪತ್ರಿಕೆಗಳ ಲೀಕಾಸುರರು ಸಿಕ್ಕಿಬಿದ್ದಿದ್ದಾರೆ.
ಆರೋಪಿ ಚಂದ್ರು ಬೆಂಗಳೂರಿನ ಕೊರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ವಿಜಿಲೆನ್ಸ್ ಇನ್ಸ್ಪೆಕ್ಟರ್. ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಚಂದ್ರು, ಬಳಿಕ ಇಲಾಖೆಯಲ್ಲಿರುವ ಅಧಿಕಾರಿಗಳನ್ನ ಬಳಸಿಕೊಂಡು ಪ್ರಶ್ನೆ ಪತ್ರಿಕೆ ಪಡೆದಿದ್ದ. ಈ ಹಿಂದೆಯೂ ಬೇರೆ ಬೇರೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಈತನ ಪಾಲಿರುವ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)
ಪತ್ನಿಯ ಕೊಲೆಗೆ ಕೆಎಎಸ್ ಅಧಿಕಾರಿ ಸಂಚು! ಕಾರಣ ಕೇಳಿದ್ರೆ ಹೌಹಾರುತ್ತೀರಿ…
ಧಾರವಾಡದಲ್ಲಿ ಭೀಕರ ಅಪಘಾತ: ಸಾವಿಗೂ ಮುನ್ನ ಬಾಲ್ಯ ಸ್ನೇಹಿತೆಯರ ಸುಂದರ ಕ್ಷಣಗಳ ಎಕ್ಸ್ಕ್ಲೂಸಿವ್ ವಿಡಿಯೋ ಇಲ್ಲಿದೆ
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ