ಮಂಗಳೂರು: ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್ಗಳನ್ನು ಮಾಜಿ ಶಾಸಕ ಜೆ.ಆರ್.ಲೋಬೊ ಶುಕ್ರವಾರ ಅಳಪೆ ಉತ್ತರ ವಾರ್ಡ್ ವ್ಯಾಪ್ತಿಯ ಪಡೀಲ್ ದರ್ಬಾರ್ ಗುಡ್ಡೆ ಮತ್ತು ಶಾಂತಿನಗರ ಪ್ರದೇಶಗಳ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಅಂಶಗಳನ್ನು ನೀಡುವುದಾಗಿ ಜನರಿಗೆ ಮನವರಿಕೆ ಮಾಡಿದರು.
ಪ್ರತಿಯೊಂದು ಮನೆಗೆ ಹೋದಾಗ ಜನರು ಉತ್ತಮ ಸ್ಪಂದನೆ ನೀಡಿದ್ದಾರೆ. ಕಾಂಗ್ರೆಸ್ ಬಡ ಜನರ ಪರವಾಗಿದೆ ಎಂದರು. ವಾರ್ಡ್ ಅಧ್ಯಕ್ಷ ಡೇನಿಸ್ ಡಿಸಿಲ್ವ, ಹೆನ್ರಿ ಡಿಸೋಜಾ, ಶೋಭಾ ಕೇಶವ, ಚಂದಪ್ಪ, ಸ್ಟಾೃನಿ, ಪ್ರವೀಣ್ ರೇಗೋ, ಹೆನ್ರಿ ಫೇರಾವೋ, ಕೇಶವ ಪಡೀಲ್, ವಿಕ್ಟರ್, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.