More

    ಕಾಂಗ್ರೆಸ್ ಗೆಲುವಿಗೆ ಶ್ರಮಿಸುವೆ

    ಕೊಟ್ಟೂರು: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದು, ಪಕ್ಷ ತೀರ್ಮಾನಿಸಿರುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಕಾಂಗ್ರೆಸ್ ಮುಖಂಡ ಮಲ್ಲನಾಯ್ಕನಹಳ್ಳಿ ಪಿ.ಎಚ್. ದೊಡ್ಡ ರಾಮಣ್ಣ ಹೇಳಿದರು.

    ಮಲ್ಲನಾಯ್ಕನಹಳ್ಳಿಯಲ್ಲಿ ಶನಿವಾರ ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಹ ಸ್ಪರ್ಧಾಕಾಂಕ್ಷಿಯಾಗಿದ್ದೆ, ಆದರೆ ಹೈಕಮಾಂಡ್ ಹಾಲಿ ಶಾಸಕ ಭೀಮಾನಾಯ್ಕಗೆ ಟಿಕೆಟ್ ನೀಡಿದೆ. ಇದರಿಂದ ಬೇಸರವಿಲ್ಲ. ಪಕ್ಷವನ್ನು ರಾಜ್ಯದಲ್ಲಿ ಆಡಳಿತಕ್ಕೆ ತರಲು ಅದರ ಸಿದ್ಧಾಂತಕ್ಕೆ ಬದ್ಧಾನಿ ದುಡಿಯುವೆ ಎಂದರು.

    ರಾಜ್ಯ ಬೀಜನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಮಾತನಾಡಿ, ಶಾಸಕ ಭೀಮಾನಾಯ್ಕ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕೆಂದು ಸಲಹೆ ನೀಡಿದರು.

    ತಾಪಂ ಮಾಜಿ ಅಧ್ಯಕ್ಷ ಹರಾಳು ಕೊಟ್ರಗೌಡ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ತಿಮ್ಮಲಾಪುರದ ಕೊಟ್ರೇಶ, ಚಪ್ದರದಹಳ್ಳಿ ಕೊಟ್ರೇಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಪರಮೇಶ್ವರಯ್ಯ, ಅಲಬೂರು ಮಂಜುನಾಥ, ಕನ್ನನಾಯ್ಕನಕಟ್ಟಿ ಪ್ರದೀಪ್, ಕೊಟ್ಟೂರು ತಾಲೂಕು ನದಾಫ್ ಸಂಘದ ಅಧ್ಯಕ್ಷ ತಾಜ್‌ಪೀರ್, ಬಾಗಳಿ ಹುಸೇನ್ ಸಾಹೇಬ್ ಮಾತನಾಡಿದರು.

    ವೇದಿಕೆಯಲ್ಲಿ ವರ್ತಕ ಕರಡಿ ಕೊಟ್ರಯ್ಯ, ಪಪಂ ಮಾಜಿ ಸದಸ್ಯ ಪೂಜಾರ್ ನಾಗಪ್ಪ, ಪಿ.ಎಚ್. ರಾಘವೇಂದ್ರ, ಸುಣಗಾರ್ ರಾಮಣ್ಣ, ಗ್ರಾಪಂ ಸದಸ್ಯ ಗಂಗಮ್ಮನಹಳ್ಳಿ ಬಸವರಾಜ್ ಇತರರಿದ್ದರು. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನೂರ ಐವತ್ತಕ್ಕೂ ಹೆಚ್ಚು ಜನರು ಸಭೆಯಲ್ಲಿ ಹಾಜರಿದ್ದರು. ಪಿ.ಎಚ್. ಇಂದ್ರಕುಮಾರ್ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts