More

    ಮೃತರ ಕುಟುಂಬಕ್ಕೆ ಪರಿಹಾರ ನೀಡಿ: ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಒತ್ತಾಯ

    ಕೊಪ್ಪಳ: ಅಪಘಾತದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಅಡುಗೆ ನೌಕರರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಅಡುಗೆ ನೌಕರರ ಸಭೆಯಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದವರು ಜ.2ರಂದು ಅಪಘಾತಕ್ಕೀಡಾಗಿದ್ದಾರೆ.ಅಪಘಾತದಲ್ಲಿ ಕಿನ್ನಾಳದ ಅನ್ನಪೂರ್ಣಮ್ಮ ಮೃತಪಟ್ಟಿದ್ದು, ಕವಿತಾ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದುಕೊರತೆ ಅರಿಯಲು ಸರ್ಕಾರ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ.ಆದರೆ ಸಭೆಗೆ ಬಂದು ಅಪಪಘಾತಕ್ಕೀಡಾದವರ ಬಗ್ಗೆ ಸರ್ಕಾರ ಗಮನಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

    ಕಡಿಮೆ ಸಂಬಳಕ್ಕೆ ನೌಕರರು ಕೆಲಸ ಮಾಡುತ್ತಿದ್ದಾರೆ.ಅಪಘಾತಕ್ಕೀಡಾದವರ ಕುಟುಂಬಸ್ಥರು ಸಂಕಷ್ಟದಲ್ಲಿದ್ದು, ಸರ್ಕಾರ ನೆರವಿಗೆ ಧಾವಿಸಬೇಕಿದೆ. ಮೃತಪಟ್ಟ ಮಹಿಳೆ ಹಾಗೂ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸಿಐಟಿಯು ಮುಖಂಡರಾದ ನಿರುಪಾದಿ ಬೆಣಕಲ್, ಕಾಸಿಂ ಸರ್ದಾರ, ಸುಂಕಪ್ಪ ಗದಗ, ಅಲಿಮಾ, ಅನ್ನಪೂರ್ಣ, ಸುನಂದಾ, ಸುವರ್ಣ ದೇಸಾಯಿ, ಜಯಶ್ರೀ ತೋಟದಮನಿ, ರೇಣುಕಾ ರಾಂಪುರ, ಶಾಂತಾ ಕನಕಗಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts