ಕೊಪ್ಪಳ: ಸರ್ಕಾರಿ ಸಾರಿಗೆ ಮೇಲೆ ಮಹಾಮಾರಿ ಕರೊನಾ ಕರಿನೆರಳು ಕವಿದಿದ್ದು, ಸಾರಿಗೆ ಇಲಾಖೆ ನಷ್ಟದಲ್ಲಿದೆ. ಹೀಗಾಗಿ ಸರಿಯಾದ ವೇತನವಿಲ್ಲದೇ ರಾಜ್ಯ ಸಾರಿಗೆ ಸಂಸ್ಥೆಯ ನೌಕರರು ಕಂಗೆಟ್ಟಿದ್ದಾರೆ. ದಿನನಿತ್ಯದ ಜೀವನ ನಡೆಸಲು ಸಹ ಕಷ್ಟಕರವಾಗಿದೆ ಎಂದು ಸಾರಿಗೆ ನೌಕರನೊಬ್ಬ ಅಳಲು ತೋಡಿಕೊಂಡಿರುವುದು ಮನಕಲಕುವಂತಿದೆ.
ಹೌದು. ಕೊಪ್ಪಳ ಜಿಲ್ಲೆ ಗಂಗಾವತಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಕುಷ್ಟಗಿ ಮೂಲದ ಹನುಮಂತಪ್ಪ ತಮ್ಮ ಫೇಸ್ಬುಕ್ ಪೇಜ್ನಲ್ಲಿ ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿರಿ: ಸಾವಿಗೂ ಮುನ್ನ ಕೈ ಬೆಸೆದ ವೃದ್ಧ ದಂಪತಿ: ಮನಕಲಕುವ ಫೋಟೋ ನೋಡಿ ನೆಟ್ಟಿಗರಿಂದ ಕರೊನಾಗೆ ಹಿಡಿ ಶಾಪ!
ನಾನು ಒಬ್ಬ ಸಾರಿಗೆ ನೌಕರ. ಮನೆ ಬಾಡಿಗೆ ಕಟ್ಟಲು ಮತ್ತು ರೇಷನ್ ತರುವುದಕ್ಕೂ ಸಹ ನನ್ನ ಬಳಿ ಹಣವಿಲ್ಲ. ನನ್ನ ಕಿಡ್ನಿ ಮಾರಾಟಕ್ಕಿವೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಫೋನ್ ನಂಬರ್ ಸಹ ಬರೆದಿದ್ದಾರೆ. ಈ ಮೂಲಕ ಸರ್ಕಾರದ ಹನುಮಂತಪ್ಪ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿರಿ: ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂ. ದೇಣಿಗೆ ನೀಡಿ ಕಾಂಗ್ರೆಸ್ ಶಾಸಕಿ ಕೊಟ್ಟ ಕರೆ ಹೀಗಿದೆ…
ಜೆಡಿಎಸ್ ಸೇರಿದ ಗ್ರಾಪಂ ಸದಸ್ಯರಿಂದ ಖಾಲಿ ಚೆಕ್ ಪಡೆದ್ರಾ ಶಾಸಕರು? ಏನಿದರ ಒಳಗುಟ್ಟು?
Web Exclusive |ಕುಡುಕರಿಗೆ ಮದ್ಯ ದರ ಏರಿಕೆ ಕಿಕ್?; ಮದ್ಯ ಮಾರಾಟ ಕಡಿಮೆ, ಆದಾಯ ಹೆಚ್ಚು !