More

    ಸಂಗಮಕ್ಕೆ ಪ್ರವಾಸಿಗರ ದಂಡು

    ಕೂಡಲಸಂಗಮ: ಎರಡನೇ ಹಂತದ ಕರೊನಾ ಭೀತಿ ನಡುವೆಯೂ ಡಿಸೆಂಬರ್ 25 ರಿಂದ 27 ರ ವರೆಗೆ ಸತತ ಮೂರು ದಿನ ಸರ್ಕಾರಿ ರಜೆ ಹಿನ್ನೆಲೆ ಕೂಡಲಸಂಗಮಕ್ಕೆ 11,710 ಪ್ರವಾಸಿಗರು ಕ್ಷೇತ್ರಾಧಿಪತಿ ಸಂಗಮನಾಥ, ಬಸವಣ್ಣನ ಐಕ್ಯ ಸ್ಥಳದ ದರ್ಶನವನ್ನು ಪಡೆದಿದ್ದಾರೆ.

    ಕೂಡಲಸಂಗಮ ಅಭಿವೃದ್ಧಿ ಮಂಡಳಿ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಕರೊನಾ ನಿಯಮ ಪಾಲಿಸಲು ಸೂಚಿಸದೆ ಇದ್ದ ಪರಿಣಾಮ ಪ್ರವಾಸಿಗರು ಪರಸ್ಪರ ಅಂತರವಿಲ್ಲದೆ, ಮಾಸ್ಕ್ ಧರಿಸದೆ ಸಂಗಮನಾಥ, ಬಸವಣ್ಣನ ಐಕ್ಯಸ್ಥಳದ ದರ್ಶನ ಪಡೆದರು. ಭಾನುವಾರ ಎರಡನೇ ಹಂತದ ಚುಣಾವಣೆಯಿದ್ದರೂ ಬೆಳಗ್ಗೆಯಿಂದಲೇ ಅಧಿಕ ಪ್ರವಾಸಿಗರು ಸುಕ್ಷೇತ್ರಕ್ಕೆ ಆಗಮಿಸಿದರು. ದೇವಾಲಯ ಆವರಣ, ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಗಳು ನಡೆದವು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts