ಕೊಂಡ್ಲಹಳ್ಳಿ: ಮಂದಿರ, ಮಸೀದಿ, ಚರ್ಚ್ ಸೇರೆ ವಿವಿಧ ಧಾರ್ಮಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಿದ್ದು, ಇದನ್ನು ಉಲ್ಲಂಘಿಸದಂತೆ ಪಿಡಿಒ ಪ್ರಹ್ಲಾದ್ಕುಮಾರ್ ಮನವಿ ಮಾಡಿದರು.
ಗ್ರಾಮದ ಸಂತೆ ಮೈದಾನ ಸಮೀಪದ ಮಸೀದಿಗೆ ಶನಿವಾರ ಭೇಟಿ ನೀಡಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ, ಮಸೀದಿಯಲ್ಲಿ ಒಬ್ಬರಿಗೂ ಸಹ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಎಲ್ಲರೂ ಪರಿಸ್ಥಿತಿ ಅರಿತು ಮನೆಯಲ್ಲೇ ಪ್ರಾರ್ಥನೆ ಮಾಡಿ ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಮಜೀದ್ಸಾಬ್, ವಕೀಲ ಎಚ್.ಸಿ.ಪ್ರದೀಪ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್, ಫಾರ್ಮಸಿಸ್ಟ್ ವೆಂಕಟೇಶ್ನಾಯ್ಕ, ಗ್ರಾಪಂ ಮಾಜಿ ಸದಸ್ಯ ಬಿ.ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆಯರಾದ ಯಶೋದಮ್ಮ, ಮಂಜುಳಾ ಇತರರಿದ್ದರು.