ಕೊಂಡ್ಲಹಳ್ಳಿ: ಲಾಕ್ಡೌನ್ನಿಂದಾಗಿ ಬಂದ್ ಆಗಿದ್ದ ದೇಗುಲ, ಪ್ರಾರ್ಥನಾ ಮಂದಿರಗಳ ಬಾಗಿಲು ಸೋಮವಾರ ತೆರೆದವು.
ಸಮೀಪದ ಗೌರಸಮುದ್ರದ ಮಾರಮ್ಮ ದೇವಿ ಗುಡಿಯನ್ನು ಬೆಳಗ್ಗೆ ಸ್ವಚ್ಛಗೊಳಿಸಿ ತೆರೆಯಲಾಯಿತು. ಈ ಕಾರ್ಯದಲ್ಲಿ ಮುಜರಾಯಿ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.
ಬಿ.ಜಿ.ಕೆರೆಯ ಬಸವೇಶ್ವರಸ್ವಾಮಿ ದೇಗುಲದಲ್ಲಿ ರುದ್ರಾಭಿಷೇಕದೊಂದಿಗೆ ಪೂಜೆಗಳು ಆರಂಭಗೊಂಡವು. ಮೊಗಲಹಳ್ಳಿಯ ಈಶ್ವರಸ್ವಾಮಿ, ಕೋನಸಾಗರದ ತಿಮ್ಮಪ್ಪಸ್ವಾಮಿ, ತಿಪ್ಪೇರುದ್ರಸ್ವಾಮಿ, ಕೊಂಡ್ಲಹಳ್ಳಿಯ ಸಾಲೇಶ್ವರ, ದುರ್ಗಾಂಬಿಕಾ ದೇಗುಲಗಳು ತೆರೆದು ಭಕ್ತರಿಗೆ ದರ್ಶನ ನೀಡಿದವು. ಭಕ್ತರ ಸಂಖ್ಯೆ ತೀರ ವಿರಳವಾಗಿತ್ತು.