ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ಪದೇಪದೆ ಬಿಜೆಪಿ ಕಾರ್ಯಕರ್ತರ ಹತ್ಯೆ ಆಗುತ್ತಿರುವುದನ್ನು ಖಂಡಿಸಿ ನಿನ್ನೆ ಪಕ್ಷದ ಯುವ ಮೋರ್ಚಾ ಹಮ್ಮಿಕೊಂಡಿದ್ದ ನಬನ್ನಾ ಚಲೋ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು.
ಕಲ್ಲು ತೂರಾಟ..ಟೈಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು, ನೀರು, ಲಾಠಿ ಚಾರ್ಜ್ ಪ್ರಯೋಗವನ್ನು ಪೊಲೀಸರು ಮಾಡಿದ್ದರು.
ಇದೀಗ ಬಿಜೆಪಿಯ ಹಲವು ನಾಯಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾನೂನು ಬಾಹಿರವಾಗಿ ಸಭೆ ನಡೆಸಿ, ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಡಿ ಕೇಸ್ ದಾಖಲು ಮಾಡಿದ್ದಾಗಿ ತಿಳಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವಾರ್ಗಿಯಾ, ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ಸಂಸದರಾದ ಲಾಕೆಟ್ ಚಟರ್ಜಿ, ಅರ್ಜುನ್ ಸಿಂಗ್, ರಾಕೇಶ್ ಸಿಂಗ್, ಮುಖಂಡರಾದ ಭಾರತಿ ಘೋಷ್, ಜಯಪ್ರಕಾಶ್ ಮಜುಮ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಪ್ರತಿಭಟನೆ ವೇಳೆ ವೃಥಾ ನಮ್ಮ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಿನ್ನೆ ರಾತ್ರಿ ಧರಣಿ ನಡೆಸಿದ್ದರು. (ಏಜೆನ್ಸೀಸ್)
ಸಂಸದರಿಗೆ ಕರೊನಾ ಬಂತು ಅಂತ ಸಂಸತ್ತನ್ನು ಮುಚ್ಚಿದ್ದಾರಾ?: ಈಶ್ವರಪ್ಪ ಪ್ರಶ್ನೆ