ಕೊಡಗು: ಕಟುಕರ ಗುಂಡೇಟಿಗೆ ಹಸುಗಳೆರಡು ಬಲಿಯಾಗಿರುವ ಅಮಾನವೀಯ ಘಟನೆ ಕೊಡಗಿನ ಬ್ರೂಕ್ ವ್ಯೂ ಎಸ್ಟೇಟ್ನಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ತೋಟದ ಹಸುಗಳನ್ನು ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿರುವ ಎಸ್ಟೇಟ್ನಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ಕಟುಕರು ಗುಂಡಿನ ದಾಳಿ ನಡೆಸಿದ್ದು, ಮೂಕ ಪ್ರಾಣಿಗಳು ಸ್ಥಳದಲ್ಲೇ ಅಸುನೀಗಿವೆ.
ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ತಾಯ್ತನದ ರಜೆ ಬೇಡವೆಂದು ತಿಂಗಳ ಮಗುವಿನೊಂದಿಗೆ ಕರೊನಾ ಕರ್ತವ್ಯಕ್ಕೆ ಹಾಜರಾದ ಐಎಎಸ್ ಅಧಿಕಾರಿ