More

    ಈಜಲು ತೆರಳಿದ ಯುವಕ ಮೃತ್ಯು

    ಕಿನ್ನಿಗೋಳಿ: ಸಮೀಪದ ಕರ್ನಿರೆ ಶಾಂಭವಿ ನದಿಯಲ್ಲಿ ಈಜಾಡಲು ತೆರಳಿದ ಮೂವರಲ್ಲಿ ಮೂವರಲ್ಲಿ ಓರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ರಕ್ಷಿಸಲಾಗಿದೆ.
    ಕುಂದಾಪುರ ಮೂಲದ ಬೆಂಗಳೂರು ನಿವಾಸಿ ಅನಿಲ್‌ಕುಮಾರ್ ಆರ್(32) ಮೃತಪಟ್ಟವರು. ಅಣೈ. ಕೆ ಹಾಗೂ ಶ್ರೀಕಾಂತ್ ಪಾಟೀಲ್ ಅವರನ್ನು ರಕ್ಷಿಸಲಾಗಿದೆ.

    ಭಾನುವಾರ ಮಧ್ಯಾಹ್ನ ಗೆಳೆಯರಾದ ಬೆಂಗಳೂರಿನ ಸುನೀಲ್ ಕುಮಾರ್ ವೈ.ಕೆ., ಅಣೈ ಕೆ., ಶ್ರೀಕಾಂತ್ ಪಾಟೀಲ್, ಕಾರ್ತಿಕ್ ಎಸ್. ಹಾಗೂ ಸುಭಾಷ್ ಪಾಟೀಲ್ ಜತೆ ಕಿನ್ನಿಗೋಳಿ ಸಮೀಪದ ಕರ್ನಿರೆ ಅಣೆಕಟ್ಟು ಬಳಿ ಸಿನಿಮಾ ಶೂಟಿಂಗ್‌ಗಾಗಿ ಸ್ಥಳ ವೀಕ್ಷಣೆಗೆ ಅನಿಲ್‌ಕುಮಾರ್ ಬಂದಿದ್ದರು. ಈ ಸಂದರ್ಭ ಅಣೈ ಕೆ, ಶ್ರೀಕಾಂತ್ ಪಾಟೀಲ್ ಮತ್ತು ಅನೀಲ್ ಕುಮಾರ್ ಆರ್ ಈಜಾಡಲು ಶಾಂಭವಿ ನದಿಗೆ ಇಳಿದರು. ಕೆಲವೇ ಕ್ಷಣಗಳಲ್ಲಿ ಮೂವರೂ ನೀರಿನ ಸೆಳೆತಕ್ಕೆ ಸಿಲುಕಿದ್ದು, ಸಹಾಯಕ್ಕಾಗಿ ಸ್ಥಳೀಯರ ಮೊರೆ ಹೋಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಗ್ಗದ ಸಹಾಯದಿಂದ ಅಣೈ ಕೆ ಮತ್ತು ಶ್ರೀಕಾಂತ್‌ರನ್ನು ರಕ್ಷಿಸಿದ್ದಾರೆ. ಆದರೆ ಅನಿಲ್ ಕುಮಾರ್‌ಗೆ ಸರಿಯಾಗಿ ಈಜು ಬಾರದ ಕಾರಣ ನೀರಿನ ಸೆಳೆತಕ್ಕೆ ಸಿಲುಕಿ ಅವರು ಸಾವನಪ್ಪಿದ್ದಾರೆ. ಅನಿಲ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೊಬೈಲ್ ಸರ್ವೀಸ್ ಕೂಡ ಮಾಡುತ್ತಿದ್ದರು. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts