ಬೆಂಗಳೂರು: ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜನವರಿ 27 ಹಾಗೂ 28ರಂದು ಫಿನಾಲೆ ನಡೆಯಲಿದ್ದು, ಜನವರಿ 20 ಹಾಗೂ 21ರಂದು ನಿರೂಪಕ ಕಿಚ್ಚ ಸುದೀಪ್ ತಮ್ಮ ಕೊನೆಯ ಪಂಚಾಯಿತಿಯನ್ನು ನಡೆಸಲಿದ್ದಾರೆ.
ಟಾಸ್ಕ್ ವೇಳೆ ಸ್ಪರ್ಧಿಗಳು ಜಗಳವಾಡುತ್ತ ನಿಂದಿಸುತ್ತಾ, ಮನಸ್ತಾಪ, ದೂರುಗಳಿಂದಲೇ ಕಾಲ ಕಳೆಯುವ ಇವರು ಭಾನುವಾರ ನಟ ಕಿಚ್ಚ ಸುದೀಪ್ ನಡೆಸಿ ಕೊಡುವ ಸೂಪರ್ ಸಂಡೇ ವಿತ್ ಸುದೀಪದಲ್ಲಿ ನಗುವಿನ ಅಲೆಯಲ್ಲಿ ತೇಲುತ್ತಾರೆ. ಅದೇ ರೀತಿ ದೊಡ್ಮನೆಯಲ್ಲಿರುವ ಸ್ಫರ್ಧಿಗಳು ತಪ್ಪು ಮಾಡಿದರೆ ನಿರೂಪಕ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತೆಗೆದುಕೊಂಡಿರುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.
ಅದೇ ರೀತಿ ಎಲಿಮಿನೇಟ್ ಆಗಿ ಹೋದವರು ಹಾಗೆ ಮಾಡಿದರೆ ಅಂಥವರ ಬಗ್ಗೆ ನಿರೂಪಕ ಕಿಚ್ಚ ಸುದೀಪ್ ಮಾತನಾಡಿರುವುದು ತುಂಬಾ ಕಡಿಮೆ. ಆದರೆ, ಈ ವಾರ ಅದರ ಬಗ್ಗೆ ಮಾತನಾಡಲು ನಟ ಸುದೀಪ್ ಮಾತನಾಡುತ್ತಾರೆ ಎಂದು ಹೇಳಲಾಗಿದ್ದು, ಮಾಜಿ ಸ್ಫರ್ಧಿ ಈಶಾನಿ ನೀಡಿರುವ ಹೇಳಿಕೆ ಕುರಿತು ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ತೋರಿಸಲಾಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಇದನ್ನೂ ಓದಿ: ಪಿಎಸ್ಐ-ಸಿಟಿಐ ಪ್ರಶ್ನೆ ಪತ್ರಿಕೆ ಸೋರಿಕೆ; ಸಬ್ಇನ್ಸ್ಪೆಕ್ಟರ್ ವಶಕ್ಕೆ
ಬಿಗ್ಬಾಸ್ ಮನೆಯಲ್ಲಿ ಈ ವಾರ ಮಹತ್ವದ ಸಂಗತಿಗಳು ನಡೆದಿದ್ದು, ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದ ಸ್ಫರ್ಧಿಗಳು ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಡ್ರೋನ್ ಪ್ರತಾಪ್ ಕುರಿತು ಆಡಿರುವ ಮಾತುಗಳು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ವಾರದ ಕೊನೆಯಲ್ಲಿ ಈ ವಿಚಾರವನ್ನು ನಟ ಸುದೀಪ್ ಪ್ರಸ್ತಾಪ ಮಾಡುತ್ತಾರೆ ಎಂದು ಹೇಳಲಾಗಿದ್ದು, ಅದರ ಸುಳಿವು ಸಿಕ್ಕಿದೆ.
ಈ ವಾರ ಮನೆಗೆ ಹಳೇ ಗೆಳೆಯರು ವಾಪಸ್ ಬಂದರು. ಅವರು ಹೊಸ ಉತ್ಸಾಹ ತಂದ್ರಾ ಅಥವಾ ಇರುವ ಉತ್ಸಾಹವನ್ನು ಹಾಳುಮಾಡಿ ಹೋದ್ರಾ ಎಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಟ ಸುದೀಪ್ ಪ್ರಶ್ನಿಸಿದ್ದಾರೆ. ಈ ಸೀಸನ್ನ ಕೊನೇ ಪಂಚಾಯ್ತಿಯಲ್ಲಿ ಈ ಎಲ್ಲ ವಿಷಯಗಳು ಪ್ರಸ್ತಾಪ ಆಗಲಿದೆಯಾ ಎಂದು ಕಾದು ನೋಡಬೇಕಿದೆ.
ಸಿಂಪಥಿ ಕಾರ್ಡ್ ಬಳಕೆ ಮಾಡಿ ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಹೋಗುತ್ತಲೇ ಇದೆ ಎಂದು ಬಿಗ್ಬಾಸ್ ಮನೆಗೆ ಭೇಟಿ ನೀಡಿದ ಬೇಳೆ ಈಶಾನಿ ಡ್ರೋನ್ ಪ್ರತಾಪ್ ಅವರನ್ನು ಉದ್ದೇಶಿಸಿ ಹೇಳಿದ್ದರು. ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು ಮತ್ತು ಈಶಾನಿ ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿ ಕ್ಷಮೆಯಾಚಿಸಬೇಕೆಂದು ಹಲವರು ಆಗ್ರಹಿಸಿದ್ದರು.