More

    ಕಾರ್ಮಿಕನಿಗೊಲಿದ ಕೋಟಿ ರೂ.ಲಾಟರಿ!

    ವಿಜಯವಾಣಿ ಸುದ್ದಿಜಾಲ ಮಂಜೇಶ್ವರ (ಕಾಸರಗೋಡು)
    ಮಂಜೇಶ್ವರ ಪಂಚಾಯಿತಿಯ ಪಾವೂರು ನಿವಾಸಿ, ಪೇಂಟಿಂಗ್ ಕಾರ್ಮಿಕ ಮಹಮ್ಮದ್ ಯಾನೆ ಬಾವ ಅವರಿಗೆ ಕೇರಳ ರಾಜ್ಯ ಲಾಟರಿಯಲ್ಲಿ ಒಂದು ಕೋಟಿ ರೂ. ಮೊತ್ತದ ಅದೃಷ್ಟ ಒಲಿದಿದೆ.

    ಕೇರಳ ರಾಜ್ಯ 50-50 ಲಾಟರಿಯ ಭಾನುವಾರದ ಡ್ರಾದಲ್ಲಿ ಎಫ್‌ಎಫ್-537904 ಸಂಖ್ಯೆಗೆ ಈ ಅದೃಷ್ಟ ಒಲಿದಿದೆ. ಅವರು ಕಾಯಂ ಆಗಿ ಲಾಟರಿ ಖರೀದಿಸುತ್ತಿದ್ದ ಹೊಸಂಗಡಿಯ ಅಮ್ಮಾ ಲಾಟರಿ ಏಜನ್ಸಿಯಿಂದ ಈ ಟಿಕೆಟನ್ನೂ ಖರೀದಿಸಿದ್ದರು. ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಹೊಂದಿರುವ ಮಹಮ್ಮದ್ ಬಾವ ಕೂಲಿ ಕೆಲಸ ಮಾಡಿಯೇ ಇಬ್ಬರು ಮಗಳಂದಿರ ಮದುವೆ ಮಾಡಿಕೊಟ್ಟಿದ್ದಾರೆ. ಈ ಮಧ್ಯೆ ಸಾಲ ಮಾಡಿ ಮನೆ ನಿರ್ಮಿಸಿದ್ದರು. ಮರುಪಾವತಿ ಮಾಡಲಾಗದೆ ಮನೆಯನ್ನೇ ಮಾರಾಟ ಮಾಡಿ, ಬಾಡಿಗೆ ಮನೆಯಲ್ಲಿ ನೆಲೆಸಲು ಸಿದ್ಧತೆ ನಡೆಸುತ್ತಿದ್ದಂತೆಯೇ ಬಾವ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ.

    ತಮ್ಮ ಸಂತಸ ವ್ಯಕ್ತಪಡಿಸಿದ ಮಹಮ್ಮದ್, ಬದುಕಿಗಾಗಿ ಕಷ್ಟಪಡುತ್ತಿದೆ. ಮನೆಯನ್ನು ಮಾರಾಟ ಮಾಡಿ ಬದುಕು ಸಾಗಿಸಬೇಕಾಗುತ್ತಿತ್ತು. ಈ ಬಗ್ಗೆ ಮಾತುಕತೆಯೂ ನಡೆದಿತ್ತು. ಲಾಟರಿ ಒಲಿದ ಕಾರಣ, ನನ್ನ ಮನೆ ಉಳಿಯಿತು. ಖುಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts