ನವದೆಹಲಿ: ಹುತಾತ್ಮ ಯೋಧರು ಹಾಗೂ ಪೊಲೀಸರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪೌರಕಾರ್ಮಿಕನ ಕುಟುಂಬಕ್ಕೂ ಒಂದು ಕೋಟಿ ರೂ. ಪರಿಹಾರ ನೀಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕರ್ತವ್ಯನಿರತನಾಗಿದ್ದ ಪೌರ ಕಾರ್ಮಿಕ ರಾಜು ಎಂಬುವರು ಕರೊನಾದಿಂದಾಗಿ ಮೃತಪಟ್ಟಿದ್ದರು. ಅವರ ಕುಟುಬಕ್ಕೆ ಕೇಜ್ರಿವಾಲ್ ಶುಕ್ರವಾರ ಒಂದು ಕೋಟಿ ರೂ.ಗಳ ಪರಿಹಾರ ಚೆಕ್ ವಿತರಿಸಿದರು.
ಇದನ್ನೂ ಓದಿ; ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?
ಜನರ ಸೇವೆಯಲ್ಲಿದ್ದಾಗಲೇ ರಾಜು ಮೃತಪಟ್ಟಿದ್ದಾರೆ. ಇಂಥ ಎಲ್ಲ ಕೋವಿಡ್ ವಾರಿಯರ್ಗಳ ಸೇವೆ ಹೆಮ್ಮೆಯಿದೆ ಎಂದು ಕೇಜ್ರಿವಾಲ್ ಸುದ್ದಿಗಾರರೊಮದಿಗೆ ಮಾತನಾಡುತ್ತ ಹೇಳಿದರು.
ಬುಧವಾರವಷ್ಟೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಅಗ್ನಿಶಾಮಕ ಇಲಾಖೆ ಅಮಿತ್ ಬಾಲ್ಯಾನ್ ಎಂಬುವರ ಕುಟುಂಬಕ್ಕೂ ಕೇಜ್ರಿವಾಲ್ ಒಂದು ಕೋಟಿ ರೂ. ಪರಿಹಾರ ನೀಡಿದ್ದರು.
ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!
ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್ಕಾಂಗ್, ಅಮೆರಿಕ, ಬ್ರಿಟನ್ನಲ್ಲಿವೆ ಹತ್ತಾರು ಕಂಪನಿ…!