More

    ಮುಗಿಯಿತು ‘ಕಸ್ತೂರಿ ಮಹಲ್’ … ಮುಂದೇನು?

    ಬೆಂಗಳೂರು: ಕಡಿಮೆ ದಿನಗಳಲ್ಲಿ ಕಡಿಮೆ ಬಜೆಟ್​ ಚಿತ್ರಗಳನ್ನು ಮಾಡುವುದರಲ್ಲಿ ನಿರ್ದೇಶಕ ದಿನೇಶ್​ ಬಾಬು ಅವರದ್ದು ಎತ್ತಿದ ಕೈ. ಕೇವಲ ಎರಡೇ ದಿನಗಳಲ್ಲಿ ‘ಇದು ಸಾಧ್ಯ’ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಕಡಿಮೆ ದಿನಗಳಲ್ಲಿ ಚಿತ್ರ ಮಾಡುವುದಕ್ಕೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ.

    ಇದನ್ನೂ ಓದಿ: ವಿಶ್ವನಾಥನ್ ಆನಂದ್ ಬಯೋಪಿಕ್​ನಲ್ಲಿ ಧನುಷ್?

    ಈಗ್ಯಾಕೆ ಅವರ ವಿಷಯ ಎಂದರೆ, ದಿನೇಶ್​ ಬಾಬು ಅವರು ‘ಕಸ್ತೂರಿ ಮಹಲ್​’ ಎಂಬ ಚಿತ್ರ ಶುರು ಮಾಡಿದ್ದು ಗೊತ್ತೇ ಇದೆ. ಅದವರ 50ನೇ ಚಿತ್ರವಾಗಿದ್ದು, ಕಳೆದ ತಿಂಗಳೇ ಆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ, ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ‌ ಜೋಡಣೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪ್ರಥಮ ಪ್ರತಿ ಸಿದ್ದವಾಗಲಿದೆ.

    ‘ಕಸ್ತೂರಿ ಮಹಲ್​’ ಒಂದು ಸೂಪರ್​ ನ್ಯಾಚುರಲ್​ ಥ್ರಿಲ್ಲರ್​ ಆಗಿದ್ದು, ಕಸ್ತೂರಿ ಮಹಲ್​ ಎಂಬ ಮನೆಯಲ್ಲಿ ನಡೆಯುವ ಒಂದು ವಿಚಿತ್ರ ಘಟನೆಯೊಂದರ ಸುತ್ತ ಸುತ್ತುತ್ತದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದವರಿದ್ದಾರೆ.

    ಇದನ್ನೂ ಓದಿ: ಎಂಆರ್ ಜತೆಗೆ ಮಲಯಾಳಿ ಬೆಡಗಿ … ಮುತ್ತಪ್ಪ ರೈ ಕುರಿತ ಚಿತ್ರಕ್ಕೆ ಚಾಲನೆ

    ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ದಿನೇಶ್​ ಬಾಬು ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ. ರವೀಶ್ ನಿರ್ಮಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣವಿದೆ.

    ಹೊಂಬಾಳೆ ಫಿಲಂಸ್​ನ ಹೊಸ ಚಿತ್ರದಲ್ಲಿ ಶ್ರೀಮುರಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts