ಬೆಂಗಳೂರು: ಸಿದ್ದರಾಮಪ್ಪ, ವರ್ತಿಕಾ ಕಟಿಯಾರ್, ಸಿರಿಗೌರಿ, ಅನೂಪ್ ಶೆಟ್ಟಿ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.
ವರ್ಗಾವಣೆ ವಿವರ:
ಸಿದ್ದರಾಮಪ್ಪ- ಬೆಳಗಾವಿ ಕಮಿಷನರ್ ಆಗಿ ವರ್ಗಾವಣೆ
ವರ್ತಿಕಾ ಕಟಿಯಾರ್-SCRB ಯಿಂದ SP ISDಗೆ ವರ್ಗಾವಣೆ
ಸಿರಿಗೌರಿ-ಎಸ್ಪಿ ISD ಯಿಂದ ಡಿಸಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ
ಅನೂಪ್ ಶೆಟ್ಟಿ ಸಿಐಡಿಗೆ ವರ್ಗಾವಣೆ
ಅನೂಪ್ ಶೆಟ್ಟಿ ಅವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿದ್ದಾರೆ.
ಇದನ್ನೂ ಓದಿ: ಅಭಿಮಾನಿಯೊಬ್ಬ ಫೋನ್ ಕಿತ್ತುಕೊಳ್ಳಲು ಯತ್ನಿಸಿದಾಗ ಕೂಲ್ ಆಗಿಯೇ ಪರಿಸ್ಥಿತಿ ನಿಭಾಯಿಸಿದ ರಶ್ಮಿಕಾ ಮಂದಣ್ಣ
ಕಳೆದ ತಿಂಗಳು ಅಲೋಕ್ ಕುಮಾರ್ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಮತ್ತು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು.