More

    ಕಾರಟಗಿ ತಾಲೂಕಿನಲ್ಲಿ ಮಳೆ ಅಬ್ಬರ; ತುಂಬಿ ಹರಿದ ಹಳ್ಳ-ಕೊಳ್ಳ

    ಸಿದ್ದಾಪುರ: ಕಾರಟಗಿ ತಾಲೂಕಾದ್ಯಂತ ಶನಿವಾರ ಸುರಿದ ಧಾರಾಕಾರ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಹೋಬಳಿ ವ್ಯಾಪ್ತಿಯ ಬರಗೂರು, ಕೊಟ್ನೇಕಲ್, ಜಮಾಪುರ, ಸಿದ್ದಾಪುರ, ಬೆನ್ನೂರು, ನಂದಿಹಳ್ಳಿ, ಕಕ್ಕರಗೋಳ, ಗುಂಡೂರು, ಸಿಂಗನಾಳ ಸೇರಿ ಇತರ ಗ್ರಾಮಗಳಲ್ಲಿ ಮಳೆಯಾಗಿದೆ. ಮತ್ತೊಂದೆಡೆ ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಭತ್ತದ ಬೆಳೆ ಹಾನಿಗೊಳಗಾಗಿದೆ. ಈಗಾಗಲೇ ರೈತರು, ಬೆಳೆ ನಿರ್ವಹಣೆಗೆ ರಸಗೊಬ್ಬರ ಸಿಂಪಡಣೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂ. ವ್ಯಯಿಸಿದ್ದಾರೆ. ಸದ್ಯ ಭತ್ತದ ಗದ್ದೆಗೆ ನೀರು ನುಗ್ಗಿರುವುದರಿಂದ ಬೆಳೆ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts