ಥಾಯ್ಲೆಂಡ್: ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಾದ್ಯಂತ ಕನ್ನಡದ ಕಲರವ ಕೇಳಿಬರುವುದು ಸರ್ವೇಸಾಮಾನ್ಯ. ಆದರೆ ರಾಜ್ಯೋತ್ಸವ ದಿನವಾದ ಇಂದು ಕರ್ನಾಟಕದಾಚೆಗೂ ಕನ್ನಡದ ಕಹಳೆ ಮೊಳಗಿದೆ. ಆ ಮೂಲಕ ಈ ಕನ್ನಡಿಗರು ‘ಎಲ್ಲಾದರು ಇರು, ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು..’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಹೀಗೆ ರಾಜ್ಯವಲ್ಲ, ದೇಶದಾಚೆಗೆ ಕನ್ನಡದ ಕಹಳೆ ಮೊಳಗಿದ್ದೆಲ್ಲಿ ಎಂದರೆ ದೂರದ ಥಾಯ್ಲೆಂಡ್ನಲ್ಲಿ. ಥಾಯ್ಲೆಂಡ್ನ ರಾಜಧಾನಿ ಬ್ಯಾಂಕಾಕ್ನಲ್ಲಿ ಕನ್ನಡಿಗರಾದ ಡಾ.ಲೇಖನಾ, ಕಲಾ, ಲತಾ, ಶಿಲ್ಪಾ, ಚಂದ್ರಶೇಖರ್, ಅಮೋಘವರ್ಷ, ಸಂಭ್ರಮ, ಮೌನಿಶಾ ಮತ್ತು ಭಾವನಾ ಅವರು “ಹಚ್ಚೇವು ಕನ್ನಡದ ದೀಪ” ಎಂಬ ಗೀತೆಯ ಗಾಯನದ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು. ಆ ಮೂಲಕ ಥಾಯ್ಲೆಂಡ್ನಲ್ಲಿದ್ದರೂ ತಾಯ್ನಾಡ ಮರೆಯಲಾರೆವು ಎಂಬುದಕ್ಕೆ ಸಾಕ್ಷಿಯಾದರು.
ಅಂದು ಅಪ್ಪಾಜಿಗೆ, ಇಂದು ‘ಅಪ್ಪು’ಗೆ; ರಾಜ್ ಕುಟುಂಬಕ್ಕೆ 3 ದಶಕಗಳಲ್ಲಿ 2 ಕರ್ನಾಟಕ ರತ್ನ
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಮುಂದಿನ ವರ್ಷ ಮಹತ್ವದ ಬದಲಾವಣೆ; ಸಿಎಂ ಘೋಷಣೆ…