More

    ನಮ್ಮನ್ನೂ ನಂಬಿ ಪ್ಲೀಸ್

    ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ನಂತರದ ದಿನಗಳಲ್ಲಿ ಕಂಗನಾ ರಣಾವತ್ ಕೆಂಗಣ್ಣಿಗೆ ಬಾಲಿವುಡ್​ನ ಹಲವು ಜನಪ್ರಿಯ ನಟ-ನಟಿಯರು ಗುರಿಯಾಗಿದ್ದಾರೆ. ಅದಕ್ಕೆ ಕಾರಣ, ಬಾಲಿವುಡ್ ಮಾಫಿಯಾ, ಸ್ವಜನಪಕ್ಷಪಾತ, ತಾರತಮ್ಯ… ಇದೆಲ್ಲಾ ವಿಷಯಗಳ ಹಿನ್ನೆಲೆಯಲ್ಲಿ ಆಮೀರ್ ಖಾನ್, ಕರಣ್ ಜೋಹರ್, ಆಲಿಯಾ ಭಟ್ ಸೇರಿದಂತೆ ಹಲವರ ಕಾಲೆಳೆದಿದ್ದಾರೆ ಕಂಗನಾ. ಈಗ ಈ ಪಟ್ಟಿಗೆ ದೀಪಿಕಾ ಪಡುಕೋಣೆ ಸಹ ಸೇರ್ಪಡೆಯಾಗಿದ್ದಾರೆ.

    ಈ ಹಿಂದೆ, ಲವ್ ಅಫೇರ್​ಗಳು ಮುರಿದುಬಿದ್ದುದರಿಂದ ದೀಪಿಕಾ ಡಿಪ್ರೆಶನ್​ಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಏನೆಲ್ಲ ಆಯ್ತು ಎಂಬುದನ್ನು ಅವರೇ ಹೇಳಿಕೊಂಡಿದ್ದರು. ಈಗಲೂ ಡಿಪ್ರೆಶನ್ ವಿರುದ್ಧ ಹೇಗೆ ಹೋರಾಡಬೇಕು ಎಂದು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗ ಇದೇ ವಿಷಯವಾಗಿ ಕಂಗನಾ, ದೀಪಿಕಾ ಅವರ ಕಾಲೆಳೆದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಟೀಮ್ ಕಂಗನಾ, ‘ಲವ್ ಬ್ರೇಕಪ್​ನಿಂದಾಗಿ 10 ವರ್ಷಗಳ ಹಿಂದೆ ಡಿಪ್ರೆಶನ್​ಗೆ ಒಳಗಾಗಿದ್ದ ವಿಷಯದ ಬಗ್ಗೆ ದೀಪಿಕಾ ಆಗಾಗ ಹೇಳಿಕೊಳ್ಳುತ್ತಲೇ ಇರುತ್ತಾರೆ. ಜನ ಸಹ ಅದನ್ನು ನಂಬುತ್ತಾರೆ. ನನಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಎಂದು ನಾನು ಹೇಳಿದಾಗ, ಸುಶಾಂತ್​ಗೆ ಡಿಪ್ರೆಶನ್ ಇರಲಿಲ್ಲ ಎಂದು ಅವರ ತಂದೆ ಹೇಳಿದರೆ ನಮ್ಮನ್ನೂ ನಂಬಿ. ಬೇರೆಯವರಿಗೆ ಕೊಡುವ ಗೌರವವನ್ನು ನಮಗೂ ಕೊಡಿ. ಇಲ್ಲದ ಕಾಯಿಲೆಗಳನ್ನು ನಮ್ಮ ಮೇಲೆ ಹೇರುವುದಕ್ಕೆ ಯಾಕೆ ಪ್ರಯತ್ನಿಸುತ್ತೀರಿ?’ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಡಿಪ್ರೆಶನ್ ಎನ್ನುವುದು ಕೆಲವರಿಗೆ ದಂಧೆಯಾಗಿಬಿಟ್ಟಿದೆ. ಅದರ ಬಗ್ಗೆ ಹೇಳಿಕೊಂಡು ಸಿಂಪಥಿ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ’ ಎಂದು ದೀಪಿಕಾ ಅವರ ಹೆಸರನ್ನು ಹೇಳದೆಯೇ ಅವರ ಕಾಲೆಳೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts