More

    ಹಿಮಾಚಲ ಪ್ರದೇಶದಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಲು ಕಂಗನಾ ರೆಡಿಯಂತೆ …

    ದೆಹಲಿ: ಕಂಗನಾ ರಣಾವತ್​ ಇಷ್ಟೆಲ್ಲಾ ಮಾಡುತ್ತಿರುವುದು ರಾಜಕಾರಣಕ್ಕೆ ಎಂಟ್ರಿ ಕೊಡೋಕಾ? ಚುನಾವಣೆಯಲ್ಲಿ ಸ್ಪರ್ಧಿಸೋಕಾ? ಎಂಬ ಪ್ರಶ್ನೆಗಳು ಈಗಾಗಲೇ ಹಲವರಿಗೆ, ಹಲವು ಸಲ ಬಂದಿದೆ. ಅದಕ್ಕೆ ಕಾರಣ, ಕಂಗನಾ ಅವರ ರಾಜಕೀಯ ನಿಲುವು ಮತ್ತು ಮಾತುಗಳು. ಕಂಗನಾ ಪ್ರತೀ ಬಾರಿ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದಾಗ, ಅವರ ಉದ್ದೇಶ ರಾಜಕೀಯ ಸೇರುವುದಿರಬಹುದು ಎಂಬ ಮಾತು ಕೇಳಿ ಬರುತ್ತಿತ್ತು.

    ಇದನ್ನೂ ಓದಿ: ಎರಡು ಸಿನಿಮಾಗಳಿಂದ 250 ಕೋಟಿ ರೂ. ಸಂಭಾವನೆ ಪಡೆದರಾ ರಜನಿಕಾಂತ್​?

    ಆ ಮಾತು ಇದೀಗ ನಿಜವಾಗಿದೆ. ಸ್ವತಃ ಕಂಗನಾ, ತನಗೆ ಅವಕಾಶ ಸಿಕ್ಕರೆ 2024ರ ಲೋಕಸಭಾ ಚುಣಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಜನತಾ ಪಕ್ಷವು ಟಿಕೆಟ್​ ಕೊಟ್ಟರೆ, ಹಿಮಾಚಲ ಪ್ರದೇಶದ ಮಂಡಿಯಿಂದ ಚುನಾವಣೆಗಳನ್ನು ಸ್ಪರ್ಧಿಸುವುದಾಗಿ ಅವರು ಹೇಳಿಕೊಂಡಿದ್ದಾರೆ.

    ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ‘ನನಗೆ ಎಲ್ಲಾ ತರಹದ ಸ್ಪರ್ಧೆಗಳು ಸಹ ಬಹಳ ಇಷ್ಟ. ಸಮಾಜ ಸೇವೆ ಮಾಡುವುದು ಸಹ ನನ್ನ ಬಹಳ ವರ್ಷಗಳ ಆಸೆ. ಹಿಮಾಚಲ ಪ್ರದೇಶದ ಜನ ನನಗೆ ಸಮಾಜ ಸೇವೆ ಮಾಡುವ ಅವಕಾಶ ಕೊಟ್ಟರೆ, ಖಂಡಿತಾ ಚುನಾವಣೆಗಳು ಸ್ಪರ್ಧಿಸುತ್ತೇನೆ. ಅದೊಂದು ಸೌಭಾಗ್ಯ’ ಎಂದು ಹೇಳಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾಪುರುಷ ಎಂದು ವ್ಯಾಖ್ಯಾನಿಸಿರುವ ಕಂಗನಾ, ‘ನರೇಂದ್ರ ಮೋದಿ ಮತ್ತು ರಾಹುಲ್​ ಗಾಂಧಿ ಇಬ್ಬರೂ ಸ್ಪರ್ಧಿಗಳು ಎಂದು ಹೇಳುತ್ತಾರೆ. ಆದರೆ, ಮೋದಿ ಅವರಿಗೆ ಒಂದು ವಿಷಯ ಚೆನ್ನಾಗಿ ಗೊತ್ತಿದೆ, ಅವರಿಗೆ ಪ್ರತಿಸ್ಪರ್ಧಿ ಇಲ್ಲ ಎಂದು. ಇನ್ನು, ಆಮ್​ ಆದ್ಮಿ ಪಕ್ಷವು ಹಿಮಾಚಲ ಪ್ರದೇಶದಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿದೆ. ಆದರೆ, ಅದ್ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನೆನಪಿನ ಸಾಗರದಲ್ಲಿ ಒಂದು ವರ್ಷ; ಭಾವುಕ ಪತ್ರ ಬರೆದ ಅಶ್ವಿನಿ ಪುನೀತ್​ ರಾಜಕುಮಾರ್​

    ಈ ಮಧ್ಯೆ, ‘ಎಮರ್ಜೆನ್ಸಿ’ ಎಂಬ ಚಿತ್ರದಲ್ಲಿ ಕಂಗನಾ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟನೆಯ ಜತೆಗೆ ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ.

    ಮಯೋಸಿಟಿಸ್​ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಸಮಂತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts