More

    ರಣಬೀರ್​ಗೆ ಯಾಕೆ ರೇಪಿಸ್ಟ್​ ಅನ್ನಲ್ಲ; ದೀಪಿಕಾಗೆ ಯಾಕೆ ಸೈಕೋ ಅಂತ ಕರೆಯಲ್ಲ?

    ಕಂಗನಾ ರಣಾವತ್​ ಇನ್ನೂ ಯಾರ್ಯಾರ ವಿರುದ್ಧ ತಿರುಗಿ ಬೀಳುತ್ತಾರೋ ಹೇಳುವುದು ಕಷ್ಟವಾಗಿದೆ. ನೆಪೋಟಿಸಂ (ಸ್ವಜನಪಕ್ಷಪಾಯ)ದ ವಿಷಯದಲ್ಲಿ ಈಗಾಗಲೇ ಸಾಕಷ್ಟು ಜನರನ್ನು ಎದುರು ಹಾಕಿಕೊಂಡಿರುವ ಕಂಗನಾ, ಇದೀಗ ರಣಬೀರ್​ ಕಪೂರ್​ ಮತ್ತು ದೀಪಿಕಾ ಪಡುಕೋಣೆ ವಿರುದ್ಧವೂ ತಿರುಗಿಬಿದ್ದಿದ್ದಾರೆ.

    ಇದನ್ನೂ ಓದಿ: ರಜನಿಸಂಗೆ 45 ವರ್ಷ … ಸಂಭ್ರಮಾಚರಣೆ ಶುರು …

    ಇತ್ತೀಚೆಗೆ, ಈ ನೆಪೋಟಿಸಂ ಕುರಿತು ಟ್ವೀಟ್​ ಮಾಡಿದ್ದ ಒಬ್ಬರು, ರಣಬೀರ್ ಹೆಸರನ್ನು ತೆಗೆದುಕೊಂಡಿದ್ದರು. ‘ರಣಬೀರ್​ ಅಭಿನಯದ ಸಾಕಷ್ಟು ಸಿನಿಮಾಗಳು ಮಕಾಡೆ ಮಲಗಿವೆ. ಆದರೆ, ಸುಶಾಂತ್​ ಅಭಿನಯದ ‘ರಬ್ತಾ’ ಮತ್ತು ಕಂಗನಾ ಅಭಿನಯದ ‘ರಂಗೂನ್​’ ಚಿತ್ರಗಳು ಸೋಲುತ್ತಿದ್ದಂತೆಯೇ ಅವರಿಬ್ಬರನ್ನೂ ಪಕ್ಕಕ್ಕೆ ಕೂರಿಸಲಾಯಿತು. ನೆಪೋಟಿಸಂ ಏನಿದ್ದರೂ ಚಿತ್ರರಂಗಕ್ಕೆ ಬರುವುದಕ್ಕೆ ಮಾತ್ರ, ಆಮೇಲಿನದ್ದೆಲ್ಲಾ ಅವರ ಕರ್ಮ ಎನ್ನುವಂತೆ ಕೆಲವರು ಮಾತಾಡುತ್ತಾರೆ. ಇದು ನಿಜವಾದರೆ, ಅಷ್ಟೊಂದು ಫ್ಲಾಪ್​ ಸಿನಿಮಾಗಳ ನಂತರವೂ ರಣಬೀರ್​ ಇನ್ನೂ ಬ್ಯುಸಿಯಾಗಿರುವುದು ಹೇಗೆ’ ಎಂದು ಅವರು ಪ್ರಶ್ನಿಸಿದ್ದಾರೆ.

    ಇದಕ್ಕೆ ಉತ್ತರಿಸಿರುವ ಟೀಮ್​ ಕಂಗನಾ, ‘ಹುಡುಗೀರೆಂದರೆ ರಣಬೀರ್​ ಬಾಯ್ಬಾಯಿ ಬಿಡುತ್ತಾರೆ. ಆದರೂ ಆತನನ್ನ ಯಾರೂ ರೇಪಿಸ್ಟ್​ ಎಂದು ಕರೆಯುವುದಿಲ್ಲ. ದೀಪಿಕಾ ಪಡುಕೋಣೆ ಯಾವಾಗಲೂ ಮಾನಸಿಕ ಖಾಯಿಲೆಗಳ ಬಗ್ಗೆ ಮಾತಾಡುತ್ತಿರುತ್ತಾರೆ. ಆದರೂ ಆಕೆಯನ್ನು ಯಾರೂ ಸೈಕೋ ಅಥವಾ ಮಾತಗಾತಿ ಎಂದು ಕರೆಯುವುದಿಲ್ಲ. ಈ ಪಟ್ಟ ಅಥವಾ ಬಿರುದುಗಳೇನಿದ್ದರೂ, ಹೊರಗಿನಿಂದ ಬಂದ ಪ್ರತಿಭಾವಂತರಿಗೆ ಮಾತ್ರ. ಸಣ್ಣ ಊರುಗಳಿಂದ, ಮರ್ಯಾದಸ್ಥ ಕುಟುಂಬಗಳಿಂದ ಬಂದವರು ಏನೆಲ್ಲಾ ಅನುಭವಿಸಬೇಕಾಗುತ್ತದೆ ಗೊತ್ತಾ?’ ಎಂದು ಟ್ವೀಟ್​ ಮಾಡಿದೆ.

    ಇದನ್ನೂ ಓದಿ: ಈ ವಿಚಾರದಲ್ಲಿ ಅಕ್ಷಯ್​ ಕುಮಾರ್ ಅವರನ್ನೇ ಫಾಲೋ ಮಾಡ್ತಿದ್ದಾರೆ ಆಮೀರ್​ ಖಾನ್​!

    ಇದಕ್ಕೂ ಮುನ್ನ ಆಯುಷ್ಮಾನ್​ ಖುರಾನಾ ಬಗ್ಗೆ ಟೀಮ್​ ಕಂಗನಾ ಮಾತನಾಡಿತ್ತು. ಆಯುಷ್ಮಾನ್​ ತರಹದವರು ಬಾಲಿವುಡ್​ ಮಾಫಿಯಾಗೆ ಬಕೆಟ್​ ಹಿಡಿಯುತ್ತಾರೆ ಎಂದು ಆರೋಪಿಸಿದ್ದರು. ಈ ಕುರಿತು ಟ್ವೀಟ್​ ಮಾಡಿದ್ದ ಟೀಮ್​ ಕಂಗನಾ, ‘ಹೊರಗಿನಿಂದ ಬಂದ ಆಯುಷ್ಮಾನ್​ನಂಥವರು, ಬಾಲಿವುಡ್​ ಮಾಫಿಯಾ ಬೆಂಬಲಿಸುತ್ತಾ ಬಕೆಟ್​ ಹಿಡಿಯುತ್ತಾರೆ. ಅವರಿಗೆ ಯಾರಿಂದಲೂ ಬೆದರಿಕೆ ಇರುವುದಿಲ್ಲ. ಕಂಗನಾ ಮತ್ತು ಸುಶಾಂತ್​ನಂತಹ ಕೆಲವರು ಎದುರಿಸುತ್ತಿರುವ ಸಂಘರ್ಷಗಳ ಸಂಪೂರ್ಣ ಲಾಭವನ್ನು ಅವರು ಬಹಿರಂಗವಾಗಿ ನಿರಾಕರಿಸಿ, ಅಪಹಾಸ್ಯ ಮಾಡುವ ಮೂಲಕ ಮಾಫಿಯಾದವರ ಬೆನ್ನಿಗೆ ನಿಲ್ಲುತ್ತಾರೆ’ ಎಂದು ಸಮರ ಸಾರಿತ್ತು.

    ನಂಗೇನಾದ್ರೂ ಬೇರೆ ಕೆಲಸ ಇದ್ಯಾ? ನಾ ಮುಂದೇನ್​ ಮಾಡ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts