More

    ಕನಕಗಿರಿ ಶಾಸಕ ಶಿವರಾಜ ತಂಗಡಗಿಗೆ ಸಂಪುಟ ದರ್ಜೆ ಸ್ಥಾನ ನೀಡಿ

    ಕಾರಟಗಿ: ಕಾಂಗ್ರೆಸ್‌ನ ನೂತನ ಸಂಪುಟದಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿಗೆ ಸಚಿವ ಸ್ಥಾನ ನೀಡುವಂತೆ ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ ಹಾಗೂ ಹಾಲುಮತ ಸಮುದಾಯದ ಮುಖಂಡರು ಒತ್ತಾಯಿಸಿದರು.

    ಕಾರಟಗಿ ತಾಲೂಕು ಕಾಂಗ್ರೆಸ್ ಬೆಂಬಲಿತ ಹಾಲುಮತ ಸಮುದಾಯದ ಮುಖಂಡರೊಂದಿಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶಿವರಾಜ ತಂಗಡಗಿ ಆಡಳಿತಾವಧಿಯಲ್ಲಿ ರೈಸ್ ಟೆಕ್ನಾಲಜಿ ಪಾರ್ಕ್, ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ, ಕನಕಗಿರಿ-ಕಾರಟಗಿ ಎರಡು ತಾಲೂಕು ಘೋಷಣೆ ಮಾಡಿಸಿದ್ದು ಅವರ ದೂರದೃಷ್ಟಿ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

    ಇದನ್ನೂ ಓದಿ: ಶಿವರಾಜ ತಂಗಡಗಿಗೆ ಡಿಸಿಎಂ ಸ್ಥಾನ ನೀಡಲು ಗಂಗಾಮತ ಸಮಾಜ ಆಗ್ರಹ

    ಯಾವತ್ತೂ ಶಾಶ್ವತ ಯೋಜನೆಗಳ ಕುರಿತು ಆಲೋಚಿಸುವ ತಂಗಡಗಿಗೆ ಸಂಪುಟ ದರ್ಜೆ ಸ್ಥಾನ ನೀಡಿದರೆ ಕ್ಷೇತ್ರವಲ್ಲದೆ ಕರ್ನಾಟಕದ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದರು.

    ಹಿಂದಿನ ಶಾಸಕ ಬಸವರಾಜ ದಢೇಸೂಗೂರು ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ಕುಂಠಿತಗೊಂಡಿವೆ. ಕ್ಷೇತ್ರದ ಎರಡೂ ತಾಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸಿಲ್ಲ. ಜನರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಇಂತಹ ಸಂದರ್ಭ ತಂಗಡಗಿಗೆ ಸಚಿವ ಸ್ಥಾನ ನೀಡಿ ಕ್ಷೇತ್ರದ ಪ್ರಗತಿಗೆ ಅವಕಾಶ ನೀಡುವಂತೆ ನೂತನ ಸಿಎಂ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.

    ಹಾಲುಮತ ಸಮುದಾಯದ ಮುಖಂಡರಾದ ಜನಗಂಡೆಪ್ಪ ಪೂಜಾರಿ, ಅಯ್ಯಪ್ಪ ಹಟ್ಟಿ, ವಿರುಪಣ್ಣ ಮೂಲಿಮನಿ, ಅಗರೆಪ್ಪ ಕೊಟ್ನೆಕಲ್, ದೇವಪ್ಪ ಬಾವಿಕಟ್ಟೆ, ಶರಣಪ್ಪ ಪನ್ನಾಪುರ ಸಾಲೋಣಿ, ನಾಗಪ್ಪ ಸಿಂಗನಾಳ, ರುದ್ರೇಶ್ ಸಿಂಗನಾಳ, ಶಿವನಗೌಡ ಸಿಂಗನಾಳ, ಕರಿಯಪ್ಪ ಸಿಂಗನಾಳ, ಶಿವಣ್ಣ ನಾಗನಕಲ್, ಶಿವಮೂರ್ತಿ ಯರಡೋಣಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts