ಹೈದರಾಬಾದ್: ತಮಿಳಿನ ಖ್ಯಾತ ನಟರೆಲ್ಲರೂ ಇದೀಗ ಚೆನ್ನೈ ಬಿಟ್ಟು ಹೈದರಾಬಾದ್ ಹಾದಿ ಹಿಡಿದಿದ್ದಾರೆ. ಹಾಗೆಂದ ಮಾತ್ರಕ್ಕೆ ಖಾಯಂ ಆಗಿ ಅಲ್ಲಿಗೆ ತೆರಳುತ್ತಿಲ್ಲ. ಬದಲಿಗೆ ಸಿನಿಮಾ ಚಿತ್ರೀಕರಣಕ್ಕೆ ಹೊರಟು ನಿಂತಿದ್ದಾರೆ.
ಇದನ್ನೂ ಓದಿ: ಕುಕಿಂಗ್ ಶೋನಲ್ಲಿ ತಮನ್ನಾ
ಹೌದು, ತಮಿಳುನಾಡಿಗೆ ಹೋಲಿಕೆ ಮಾಡಿದರೆ, ಹೈದರಾಬಾದ್ನಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಆ ಒಂದು ಕಾರಣವನ್ನೇ ಗಮನದಲ್ಲಿಟ್ಟುಕೊಂಡು ನಟರಾದ ಕಮಲ್ ಹಾಸನ್, ಸೂರ್ಯ, ಕಾರ್ತಿ ತಮ್ಮ ಸಿನಿಮಾಗಳ ಚಿತ್ರೀಕರಣಕ್ಕೆ ರಾಮೋಜಿ ಫಿಲಂ ಸಿಟಿಯನ್ನು ಆರಿಸಿಕೊಂಡಿದ್ದಾರೆ.
ಈಗಾಗಲೇ ಕಳೆದ ಒಂದೂವರೆ ತಿಂಗಳಿಂದ ಹೈದರಾಬಾದ್ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ಬೇರೆ ಬೇರೆ ಭಾಷೆಗಳ ಸೀರಿಯಲ್ ತಂಡಗಳು ಬೀಡು ಬಿಟ್ಟಿದ್ದು, ಶೂಟಿಂಗ್ ಮಾಡಿಕೊಳ್ಳುತ್ತಿವೆ. ಕನ್ನಡದ ಸಾಕಷ್ಟು ಧಾರಾವಾಹಿಗಳು ಶೂಟಿಂಗ್ ನಡೆಸಿವೆ. ಇದೀಗ ಸಿನಿಮಾಕ್ಕೂ ಅನುವು ಮಾಡಿಕೊಟ್ಟಿದ್ದು, ಸಿನಿಮಾ ತಂಡಗಳೇ ಇದೀಗ ಹೈದರಾಬಾದ್ನತ್ತ ಮುಖ ಮಾಡಿವೆ.
ಇದನ್ನೂ ಓದಿ: ಹಿರಿಯ ನಟಿ ಕವಿತಾರ ಮಗ ಕರೊನಾಗೆ ಬಲಿ, ಪತಿಯ ಸ್ಥಿತಿ ಗಂಭೀರ
ಕಮಲ್ ಹಾಸನ್ ನಟಿಸುತ್ತಿರುವ ವಿಕ್ರಂ, ಕಾರ್ತಿ ನಟಿಸಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರ ಮತ್ತು ಸೂರ್ಯ ಹೊಸ ಸಿನಿಮಾಗಳೂ ಶೂಟಿಂಗ್ ಆರಂಭಿಸಲಿವೆ.