More

    ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ

    ಕಲಕೇರಿ: ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ಬಿಜೆಪಿ ಮುಖಂಡ ಉಮೇಶ ಕಾರಜೋಳ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಿಸಲು ರಾಮರಥಕ್ಕೆ ಗುರುವಾರ ಚಾಲನೆ ನೀಡಿದರು.
    ಗ್ರಾಮದ ಮುಖ್ಯದ್ವಾರದಿಂದ ರಾಮರಥಕ್ಕೆ ಮುದ್ದು ಕುವರಿಯರು ದೀಪದಾರುತಿ ಮಾಡಿ ಸ್ವಾಗತಿಸಿದರು. ಡೊಳ್ಳಿನ ವಾದ್ಯಗಳೊಂದಿಗೆ ರಾಮನ ಕುರಿತು ಜೈಕಾರಗಳನ್ನು ಹಾಕುತ್ತ ಮುಖ್ಯಬಜಾರಿಗೆ ಆಗಮಿಸಿ ರಥಕ್ಕೆ ಹಾಗೂ ರಷೀದಿ ಪುಸ್ತಕಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಬಹಳ ಅದ್ದೂರಿಯಿಂದ ಚಾಲನೆ ನೀಡಿದರು.
    ಉಮೇಶ ಕಾರಜೋಳ, ರಾಘವೇಂದ್ರ ವಿಜಯಪುರ ಮಾತನಾಡಿದರು. ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
    ಮುಖಂಡರಾದ ಸಿದ್ದು ಬುಳ್ಳಾ, ನಿಧಿ ಸಂಗ್ರಹದ ಸಹ ಪ್ರಮುಖರಾದ ಶೇಖರಗೌಡ ಹರನಾಳ, ಸತ್ಸಂಗ ಪ್ರಮುಖರಾದ ಬಸವರಾಜ ಬಿರದಾರ, ಎಪಿಎಂಸಿ ಸದಸ್ಯರಾದ ಪ್ರಕಾಶ ಪಡಶೆಟ್ಟಿ, ಶರಣಪ್ಪ ಮೋಪಗಾರ, ವಿಶ್ವನಾಥ ಸಬರದ, ಸುರೇಶ ಕಡಕೋಳ, ಯಮನೂರಿ ಕುಲಕರ್ಣಿ, ರಾಜು ವಿಶ್ವನಾಥ ರಾಠೋಡ, ವಿನೋದಕುಮಾರ ಮಣೂರ, ಸಂತೋಷ ಝಳಕಿ, ಸಾಗರ ಗಾಯಕವಾಡ, ವಿರೇಶ ಗೊಬ್ಬೂರ ಹಾಗೂ ಬಿಜೆಪಿ ಯುವ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts