More

    ವಿಶ್ವವಿಖ್ಯಾತ ಜೋಗದಲ್ಲಿ ಅರಳಿದ ಕಮಲ

    ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ವಾಸಂತಿ ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಬುಧವಾರ ಅವಿರೋಧ ಆಯ್ಕೆಯಾದರು. ಇದರೊಂದಿಗೆ ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಸ್ವತಂತ್ರವಾಗಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ. 2004ರಲ್ಲಿ ಆಸ್ತಿತ್ವಕ್ಕೆ ಬಂದ ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಉದಯವಾದ ನಂತರ ನಾಲ್ಕನೇ ಅವಧಿ ಚುನಾವಣೆ ಕಳೆದ ಕಳೆದ ನವೆಂಬರ್​ನಲ್ಲಿ ನಡೆದಿತ್ತು. ಪಟ್ಟಣ ಪಂಚಾಯಿತಿಯ ಹನ್ನೊಂದನೇ ಅಧ್ಯಕ್ಷರಾಗಿ ವಾಸಂತಿ ರಮೇಶ್ ಹಾಗೂ ಏಳನೇ ಉಪಾಧ್ಯಕ್ಷರಾಗಿ ಪಿ.ಮಂಜುನಾಥ್ ಆ್ಕಯೆಾದರು.

    ಕಾಂಗ್ರೆಸ್​ನಿಂದ ಗೆದ್ದ ಏಕೈಕ ಸದಸ್ಯ ಎಂ.ರಾಜು ಅವರು ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದರು. ಆದರೆ ಅವರ ನಾಮಪತ್ರಕ್ಕೆ ಸೂಚಕರಿಲ್ಲದ ಕಾರಣ ಪರಿಶೀಲನೆ ವೇಳೆ ಅವರ ಅರ್ಜಿ ತಿರಸ್ಕೃತಗೊಂಡಿತು.

    ಮೂಲತಃ ಶಿವಮೊಗ್ಗದ ಹಳೇ ಮಂಡ್ಲಿಯ ನಿವಾಸಿಯಾಗಿರುವ ವಾಸಂತಿ ರಮೇಶ್ ಅವರು ಎಸ್​ಎಸ್​ಎಲ್​ಸಿ ಶಿಕ್ಷಣವನ್ನು ಪಡೆದಿದ್ದು ಕೆಲ ವರ್ಷಗಳ ಹಿಂದೆ ಕಾರ್ಗಲ್​ನ ರಮೇಶ್ ಅವರನ್ನು ಮದá-ವೆಯಾಗಿದ್ದಾರೆ. 5ನೇ ವಾರ್ಡಿನಿಂದ ಗೆಲುವು ಪಡೆದಿದ್ದು ಪ್ರಸ್ತುತ ಜೋಗ ರಸ್ತೆಯಲ್ಲಿ ವಾಸವಾಗಿದ್ದಾರೆ. ಮೂಲತಃ ಚಾಲಕರಾದ ಪಿ.ಮಂಜುನಾಥ್ ಅವರು ಬಿಜೆಪಿ ಪಕ್ಷವನ್ನು ಸೇರಿ ಆರು ವರ್ಷಗಳಾಗಿದೆ. ಅವರ ಪತ್ನಿ ಪಾರ್ವತಿ ಅವರು ಕಳೆದ ಪಟ್ಟಣ ಪಂಚಾಯಿತಿಯ ಆಡಳಿತಾವಧಿಯಲ್ಲಿ ಇದೇ ವಾರ್ಡಿನ ಬಿಜೆಪಿ ಸದಸ್ಯರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts