More

    ಕಂಗನಾ 10 ಸಿನಿಮಾ ಮಾಡಿಲ್ಲ, ಆಗಲೇ ಪದ್ಮಶ್ರೀ ಪ್ರಶಸ್ತಿನಾ? ತಾರತಮ್ಯದ ಬಗ್ಗೆ ಜಯಸುಧಾ ಬೇಸರ

    ಹೈದರಾಬಾದ್​: ದಕ್ಷಿಣ ಮತ್ತು ಬಾಲಿವುಡ್​ ನಡುವೆ ಯಾರು ಬೆಸ್ಟು ಎಂಬ ಚರ್ಚೆ ಕೆಲವು ದಿನಗಳಿಂದ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ದಕ್ಷಿಣದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸದ್ಯಕ್ಕಂತೂ ಓಟಿಟಿಗಳಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇಲ್ಲ … ಯಾಕೆ ಗೊತ್ತಾ?

    ಆಹಾ ಓಟಿಗಾಗಿ ನಂದಮೂರಿ ಬಾಲಕೃಷ್ಣ ನಡೆಸಿಕೊಡುತ್ತಿರುವ ‘ಅನ್​ಸ್ಟಾಪಬಲ್​’ ಎಂಬ ಕಾರ್ಯಕ್ರಮದಲ್ಲಿ ಹಿರಿಯ ನಟಿಯರಾದ ಜಯಸುಧಾ ಮತ್ತು ಜಯಪ್ರದಾ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ಆಗುತ್ತಿರು ತಾರತಮ್ಯಗಳ ಕುರಿತು ಮಾತನಾಡುವುದರ ಜತೆಗೆ, ದಕ್ಷಿಣದವರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ಹೊರಹಾಕಿದ್ದಾರೆ.

    ‘ಕಂಗನಾ ರಣಾವತ್​ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ನನಗೆ ಆ ಬಗ್ಗೆ ಬೇಸರವಿಲ್ಲ. ಅವರೊಬ್ಬ ಅದ್ಭುತ ನಟಿ. ಆದರೆ, ಅವರು 10 ಸಿನಿಮಾ ಮುಗಿಸೋಕಿಂತ ಮುನ್ನ ಅವರಿಗೆ ಅಂಥದ್ದೊಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿತು. ನಾನು ನೂರಾರು ಚಿತ್ರಗಳಲ್ಲಿ ನಟಿಸಿದ್ದೇವೆ. ಆದರೆ, ಯಾವ ಸರ್ಕಾರವೂ ಗುರುತಿಸಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: 9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …

    ಈ ಬಗ್ಗೆ ಮತ್ತಷ್ಟು ಮಾತನಾಡಿರುವ ಅವರು, ‘ನಾವು ಬಿಡಿ. ಗಿನ್ನೀಸ್​ ದಾಖಲೆಗೆ ಭಾಜನರಾದ ನಟಿ-ನಿರ್ದೇಶಕಿ ವಿಜಯ ನಿರ್ಮಲಾ ಅವರಿಗೂ ಅಂಥದ್ದೊಂದು ಪ್ರಶಸ್ತಿ ಸಿಗಲಿಲ್ಲ. ಕೆಲವೊಮ್ಮೆ, ದಕ್ಷಿಣದವರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆಯಾ ಎಂದನಿಸುತ್ತದೆ. ಇಂಥದ್ದನ್ನೆಲ್ಲ ನಾವು ಕೇಳಿ ಪಡೆಯಬಾರದು. ನಮಗೆ ಗೌರವಯುತವಾಗಿ ಸಿಗಬೇಕು’ ಎಂದು ಹೇಳಿದ್ದಾರೆ.

    ಈ ವರ್ಷ ಸ್ಯಾಂಡಲ್​ವುಡ್​ ಹೀರೋಗಳ ಪೈಕಿ ಹೊಸ ದಾಖಲೆ ಬರೆದ ಧನಂಜಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts