More

    ನಟಿ ಕಂಗನಾ ರಣಾವತ್​ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಜಾವೇದ್ ಅಖ್ತರ್

    ಮುಂಬೈ: ನಟಿ ಕಂಗನಾ ರಣಾವತ್​ ವಿರುದ್ಧ ಬಾಲಿವುಡ್​ನ ಹಿರಿಯ ಸಾಹಿತಿ ಜಾವೇದ್​ ಅಖ್ತರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    ಇದನ್ನೂ ಓದಿ: ಫಿಕ್ಸ್​ ಆಯ್ತು ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ: ಟ್ವೀಟ್​ ಮೂಲಕ ಸರ್ಪ್ರೈಸ್​!

    ಸುಶಾಂತ್​ ಸಿಂಗ್​ ರಜಪೂತ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸುಖಾಸುಮ್ಮನೆ ಕಂಗನಾ ನನ್ನ ಹೆಸರನ್ನು ಬಳಸಿದ್ದರು. ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಿದ್ದರು ಎಂದು ಆರೋಪಿಸಿ ದೂರು ನೀಡಿದ್ದಾರೆ.

    ಕಳೆದ ಆರು ತಿಂಗಳಿಂದ ಬಾಲಿವುಡ್​ನಲ್ಲಿ ಕಂಗನಾ ತಮ್ಮ ತರಹೇವಾರಿ ಹೇಳಿಕೆಗಳ ಮೂಲಕವೇ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು.ಬಾಲಿವುಡ್​ನ ಬಹುತೇಕ ಎಲ್ಲ ಕಲಾವಿದರಿಗೆ ಮಾತಿನ ಮೂಲಕವೇ ಚಾಟಿ ಬೀಸಿದ್ದರು.

    ಇದನ್ನೂ ಓದಿ: ನನ್ನ ಮಗಳು ಮಾಡಿದ ಸಹಾಯವನ್ನು ಯಾರೂ ನೆನಪಿಸಿಕೊಳ್ತಿಲ್ಲ; ರಾಗಿಣಿ ತಂದೆ ಬೇಸರ

    ಈಗಾಗಲೇ ಮಹಾರಾಷ್ಟ್ರ ಸರ್ಕಾರ ಮತ್ತು ಒಂದಷ್ಟು ಬಾಲಿವುಡ್​ನ ಸ್ಟಾರ್ ನಟರಿಂದಲೂ ಕೆಂಗೆಣ್ಣಿಗೆ ಗುರಿಯಾಗಿರುವ ಕಂಗನಾ ವಿರುದ್ಧ ಹಲವರು ದೂರು ನೀಡಿದ್ದಾರೆ. ಇತ್ತೀಚೆಗಷ್ಟೇ ತುಮಕೂರಿನಲ್ಲಿಯೂ ಕಂಗನಾ ವಿರುದ್ಧ ವಕೀಲರೊಬ್ಬರು ದೂರು ನೀಡಿದ್ದರು. (ಏಜೆನ್ಸೀಸ್​)

    ಬಾಲಿವುಡ್​ ಹಿರಿಯ ನಟ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts