ಬಾರ್ ತೆರೆಯಲು ಅನುಮತಿ ನೀಡಬೇಡಿ

blank

ಜಮಖಂಡಿ: ನಗರದ ಬಸವೇಶ್ವರ ವೃತ್ತ ಸಮೀಪ ವಿಜಯಪುರ ರಸ್ತೆ ಪಕ್ಕದ ರಿ.ಸ.ನಂ. 4734/ಬಿ/54 ರ ಕಟ್ಟಡದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸಾರ್ವಜನಿಕರು ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಮುಖಂಡರು ಮಾತನಾಡಿ, ಬಾರ್ ತೆರೆಯಲು ಉದ್ದೇಶಿಸಲಾಗಿರುವ ಕಟ್ಟಡದ ಎದುರಿಗೆ ಓಂಶಾಂತಿ ಸಂಸ್ಥೆಯ ಪವಿತ್ರವನ, ಪಕ್ಕದಲ್ಲಿ ಕೃಷ್ಣಾ ಕಣ್ಣಿನ ಆಸ್ಪತ್ರೆ, ಹಿಂದುಗಡೆ ಬಸವಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಗಳು ಇವೆ. ಅಲ್ಲದೆ, ಅದರ ಸುತ್ತಲೂ ಸಾರ್ವಜನಿಕರ ವಾಸದ ಮನೆಗಳು ಇವೆ. ಓಂಶಾಂತಿ ಸಂಸ್ಥೆಯ ಪವಿತ್ರವನದಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಆಧ್ಯಾತ್ಮಿಕ ಕೇಂದ್ರ ನಿರ್ವಹಿಸಲಾಗುತ್ತಿದೆ. ಆಧ್ಯಾತ್ಮಿಕ ಕೇಂದ್ರದ ಎದುರು ಬಾರ್ ತೆರೆಯುವುದರಿಂದ ಬ್ರಹ್ಮಕುಮಾರಿಯರಿಗೆ ಮತ್ತು ಪವಿತ್ರವನಕ್ಕೆ ಬರುವ ಸಾಧಕರಿಗೆ ತೊಂದರೆ ಉಂಟಾಗುತ್ತದೆ ಎಂದು ದೂರಿದರು.

ನಗರಸಭೆ ಪೌರಾಯುಕ್ತ, ಅಬಕಾರಿ ಇಲಾಖೆ ನಿರೀಕ್ಷಕ ಹಾಗೂ ಸ್ಥಳೀಯ ಶಾಸಕರ ಕಚೇರಿಗೆ ಮನವಿ ಸಲ್ಲಿಸಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.

ಓಂಶಾಂತಿ ಸಂಸ್ಥೆ ಪರವಾಗಿ ನಿಲೇಶ ಹಜಾರೆ, ರಾಮಕೃಷ್ಣ ಪನಾಳಕರ, ಕೃಷ್ಣಾ ಕಣ್ಣಿನ ಆಸ್ಪತ್ರೆ ಪರವಾಗಿ ಅತ್ತೆಪ್ಪ ಜನವಾಡ, ಬಸವಜ್ಯೋತಿ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ, ಸಾರ್ವಜನಿಕರ ಪರವಾಗಿ ಮಹಾಂತೇಶ ಹುಲಮನಿ, ವಿನೋದ ಅಡಹಳ್ಳಿ, ಮುರಳೀಧರ ಸಾರಡಾ ಇತರರು ಇದ್ದರು.





Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…