ಬಾಲಿವುಡ್ ಸುಂದರಿಯರಿಗೆ ದಕ್ಷಿಣದ ಚಿತ್ರರಂಗ ಹೊಸದೇನಲ್ಲ. ಹಲವು ದಶಕಗಳಿಂದ ಆ ಸಂಪ್ರದಾಯ ನಡೆದುಕೊಂಡು ಬರುತ್ತಲೇ ಇದೆ. ಈಗಲೂ ಅದು ಮುಂದುವರಿದಿದೆ. ಇದೀಗ ನಟಿ ಜಾಕ್ಲೀನ್ ಫರ್ನಾಂಡೀಸ್ ಸರದಿ. ಇತ್ತೀಚೆಗಷ್ಟೇ ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾ ಮೂಲಕ ದಕ್ಷಿಣಕ್ಕೆ ಬಲಗಾಲಿಟ್ಟು ಬಂದ ಜಾಕ್ಲೀನ್, ಪವನ್ ಕಲ್ಯಾಣ್ ಜತೆಗೆ ‘ಹರಿಹರ ವೀರ ಮಲ್ಲು’ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಅದು ಈಗಾಗಲೇ ಅಧಿಕೃತವೂ ಆಗಿದೆ. ಇದೀಗ ಹೊಸ ಸುದ್ದಿ ಏನೆಂದರೆ, ನಾಗಾರ್ಜುನ ಅಭಿನಯದ ಹೊಸ ಚಿತ್ರದಲ್ಲಿಯೂ ಜಾಕ್ಲೀನ್ ನಾಯಕಿಯಂತೆ.
‘ದಿ ಘೋಸ್ಟ್’ ಚಿತ್ರಕ್ಕೆ ಈ ಮೊದಲು ಕಾಜಲ್ ಅಗರ್ವಾಲ್ ನಾಯಕಿ ಎನ್ನಲಾಗಿತ್ತು. ಆದರೆ, ಈ ನಡುವೆ ದಿಢೀರ್ ಬದಲಾವಣೆಗಳಾಗಿದ್ದು, ಕಾಜಲ್ ಬದಲಿಗೆ ಜಾಕ್ಲೀನ್ಗೆ ಚಿತ್ರತಂಡ ಮಣೆಹಾಕಿದೆಯಂತೆ. ಕಾರಣ ಹುಡುಕ ಹೊರಟರೆ, ಕಾಜಲ್ ಗರ್ಭಿಣಿ ಎಂಬ ಉತ್ತರ ಸಿಗುತ್ತದೆ. ಹಾಗಾಗಿಯೇ ಅವರನ್ನು ಚಿತ್ರತಂಡದಿಂದ ಕೈಬಿಟ್ಟು ಜಾಕ್ಲೀನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಸುದ್ದಿ ಹರಿದಾಡು ತ್ತಿದ್ದರೂ ಕಾಜಲ್ ಮಾತ್ರ ಯಾವೊಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ. ಅವರು ಮೌನವಾಗಿರುವುದು ಮತ್ತು ಯಾವುದೇ ಹೊಸ ಚಿತ್ರಗಳನ್ನು ಒಪ್ಪದಿರುವುದು, ಈ ವಿಷಯಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇತ್ತ ಕಾಜಲ್ ಕೈಯಲ್ಲಿ ಬೇರೆ ಯಾವುದೇ ಹೊಸ ಸಿನಿಮಾಗಳಿಲ್ಲ. ‘ಆಚಾರ್ಯ’ ಚಿತ್ರ ಬಿಡುಗಡೆ ಹಂತದಲ್ಲಿದ್ದರೆ, ‘ಇಂಡಿಯನ್ 2’ ಚಿತ್ರದ ಶೂಟಿಂಗ್ ಸದ್ಯಕ್ಕೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. –ಏಜೆನ್ಸೀಸ್
ಜಗಳದ ನಡುವೆ ಶೂಟೌಟ್: ಮಗನಿಗೇ ಬಿತ್ತು ಅಪ್ಪನ ಗುಂಡು