ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರು ಭಾರತೀಯ ರಾಜ್ಯ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧವೇ ಇಸ್ರೇಲಿ ಬೇಹುಗಾರಿಕಾ ಸಾಫ್ಟ್ವೇರ್ ಪೆಗಾಸಸ್ ಬಳಸಿದ್ದಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
“ಪೆಗಾಸಸ್ ಅನ್ನು ರಾಜಕೀಯವಾಗಿ ಬಳಸಿದ್ದಾರೆ. ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಬಳಸಿದ್ದಾರೆ. ಸುಪ್ರೀಂ ಕೋರ್ಟ್ ವಿರುದ್ಧವೂ ಬಳಸಿದ್ದಾರೆ. ಈ ದೇಶದ ಎಲ್ಲಾ ಸರ್ಕಾರಿ ಸಂಸ್ಥೆಗಳ ವಿರುದ್ಧವೂ ಬಳಸಿದ್ದಾರೆ. ಇದು ದೇಶದ್ರೋಹ. ಇದಕ್ಕೆ ಬೇರೆ ಪದಗಳೇ ಇಲ್ಲ ಎಂದು ಎಂದು ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಫೋನ್ ಕೂಡ ಕದ್ದಾಲಿಸಲಾಗಿದೆ. ಇದು ಕೇವಲ ರಾಹುಲ್ ಗಾಂಧಿಯ ಗೌಪ್ಯತೆ ವಿಷಯವಲ್ಲ. ಪ್ರತಿಪಕ್ಷದ ಓರ್ವ ನಾಯಕನಾಗಿ ಜನರ ಪರವಾಗಿ ನನ್ನ ದನಿಯೇರಿಸುತ್ತೇನೆ. ಇದು ಜನರ ದನಿಯ ಮೇಲಿನ ದಾಳಿಯಾಗಿದೆ. ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು. ನರೇಂದ್ರ ಮೋದಿ ವಿರುದ್ಧ ಸುಪ್ರೀಂಕೋರ್ಟ್ ತನಿಖೆ ನಡೆಸಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿಯ ವಕ್ತಾರ ರಾಜವರ್ಧನ್ ರಾಥೋಡ್ ಪ್ರತಿಕ್ರಿಯಿಸಿದ್ದು, ಅವರ ಫೋನ್ ಕದ್ದಾಲಿಸಲಾಗಿದೆ ಎಂದು ಯೋಚಿಸಿದರೆ, ಕಾಂಗ್ರೆಸ್ ನಾಯಕ ತಮ್ಮ ಫೋನ್ ಅನ್ನು ತನಿಖಾಸಂಸ್ಥೆಗೆ ಹಸ್ತಾಂತರಿಸಬಹುದು. ಐಪಿಸಿ ಸೆಕ್ಷನ್ ಅಡಿಯಲ್ಲಿ ಸರಿಯಾದ ತನಿಖೆ ನಡೆಯುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಪೆಗಾಸಿಸ್ ಸಾಫ್ಟ್ವೇರ್ ಅನ್ನು ಭಾರತೀಯರ ಮೇಲೆಯೇ ಬಳಸಲಾಗಿದೆ ಎಂಬ ಗಂಭೀರ ಆರೋಪವನ್ನು ಸರ್ಕಾರ ಅಲ್ಲಗೆಳೆದಿದೆ. ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುಂಚಿನ ಆರೋಪಗಳು “ಭಾರತೀಯ ಪ್ರಜಾಪ್ರಭುತ್ವವನ್ನು ಕೆಡಿಸುವ” ಗುರಿಯನ್ನು ಹೊಂದಿವೆ ಎಂದಿದೆ. (ಏಜೆನ್ಸೀಸ್)
ಬಿಎಸ್ವೈ-ಹೈಕಮಾಂಡ್ ನಡುವೆ 2 ವರ್ಷಕ್ಕೆ ಒಪ್ಪಂದ ಆಗಿತ್ತು… ಬಿಜೆಪಿ ಸಂಸದರಿಂದಲೇ ಹೊರಬಿತ್ತು ಸ್ಫೋಟಕ ಮಾಹಿತಿ
ಮಹಿಳೆಯರನ್ನು ಪುಸಲಾಯಿಸಿ ಬೆತ್ತಲೆ ಚಿತ್ರ ತರಿಸಿಕೊಳ್ಳುತ್ತಿದ್ದ ಖದೀಮ! ಕೃತ್ಯಕ್ಕೆ ಮೊಬೈಲ್ ಆ್ಯಪ್ ಬಳಕೆ