More

    ಉತ್ತಮ ಮೌಲ್ಯದಿಂದ ಪರಿಪೂರ್ಣ ಪ್ರಜೆಯಾಗಲು ಸಾಧ್ಯ

    ನವಲಗುಂದ: ಜೀವನದಲ್ಲಿ ಉತ್ತಮ ಮೌಲ್ಯ ರೂಢಿಸಿಕೊಂಡಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಬಳ್ಳೂರಿನ ಸಿದ್ಧಾರೂಢ ವಿದ್ಯಾನಂದ ಭಾರತಿ ಸ್ವಾಮೀಜಿ ವಿವರಣೆ ನೀಡಿದರು.
    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿಯಲ್ಲಿ ವಿವಿಧ ಇಲಾಖೆ ಸಹಯೋಗದಲ್ಲಿ ತಾಲೂಕಿನ ಬಳ್ಳೂರ ಗ್ರಾಮದಲ್ಲಿ ಸ್ವಚ್ಛತೆಗಾಗಿ ಯುವಜನತೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
    ಪ್ರಾಚಾರ್ಯ ಡಾ.ಎಂ.ಬಿ. ಬಾಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಹೃದಯಗೌಡ ಪಾಟೀಲ, ಉದಯಗೌಡ ಪಾಟೀಲ, ಡಾ. ಸಂತೋಷ ಹುಬ್ಬಳ್ಳಿ, ಬಿ.ವಿ. ಏಣಗಿ, ಪ್ರಸನ್ನ ಪಂಢರಿ, ವಿನಾಯಕ ಮಿರಜಕರ, ಡಾ. ಐ.ಬಿ. ಸಾತಿಹಾಳ, ಜಿ.ಆರ್. ಅಕ್ಕಿ , ಚನ್ನಪ್ಪಗೌಡ ಪಾಟೀಲ, ಕಲ್ಲನಗೌಡ ಪಾಟೀಲ, ಶಿವಪ್ಪ ಹೊನಮಿಸಿ, ಪಿ.ಎನ್. ಬಳ್ಳಾರಿ, ವೀರಣ್ಣ ತೂಗ್ಗಿ, ಮತ್ತಿತರರು ಇದ್ದರು.
    ಬಸವರಾಜ ಸೂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೈ.ಎನ್. ಗುಳಗುಂದಿ ಸ್ವಾಗತಿಸಿದರು. ಸುಷ್ಮಾ ಹೊಳೆಯಣ್ಣವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts