ಹೊಸಪೇಟೆ: ಇಸ್ಪೀಟ್ ಜೂಜುಕೋರರಿಂದ 20 ಸಾವಿರ ರೂ. ನಗದು ಹಾಗೂ ಮೊಬೈಲ್ ದೋಚಿ, ಪ್ರಕರಣ ದಾಖಲಿಸದೆ ವಂಚಿಸಿದ್ದ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊಸಪೇಟೆ ಪಟ್ಟಣ ಠಾಣೆಯ ಪೇದೆಗಳಾದ ಎಂ.ಮಹೇಶ್, ಎಚ್.ಟಿ.ಅಭಿಷೇಕ, ಎಂ.ಮಂಜುನಾಥ ಮತ್ತು ಶ್ರೀಕಾಂತ ಮೇಟಿ ಬಂಧಿತರು. ಈ ನಾಲ್ವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೀಪಾವಳಿ ಹಬ್ಬದ ನಿಮಿತ್ತ ಅ.23ರಂದು ಬೆಳಗಿನಜಾವ ನಗರದ ಹಳೇ ಕೆಇಬಿ ಹಿಂಭಾಗದ ಚಲುವಾದಿ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಇಸ್ಪೀಟ್ ಆಡುತ್ತಿದ್ದರು. ಮಾಹಿತಿ ತಿಳಿದ ನಾಲ್ವರು ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಓಡಿ ಹೋಗಿದ್ದು, ವೆಂಕಟೇಶ್ ಮತ್ತು ಪರಸ, ಸತ್ಯೇಶ್ ಸಿಕ್ಕಿಬಿದ್ದಿದ್ದರು. ಅವರಿಂದ 20 ಸಾವಿರ ರೂ. ನಗದು ಮತ್ತು 3 ಸಾವಿರ ರೂ. ಮೌಲ್ಯದ ಫೋನ್ ಕಿತ್ತುಕೊಂಡಿದ್ದರು. ಆದರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸದೆ ಜೂಜುಕೋರರಿಂದ ವಶಕ್ಕೆ ಪಡೆದಿದ್ದ ಹಣವನ್ನು ಪೇದೆಗಳು ಜೇಬಿಗಿಳಿಸಿದ್ದರು. ದೂರುದಾರ ವೆಂಕಟೇಶ್ ಠಾಣೆಗೆ ಬಂದಾಗ ಇದು ಬೆಳಕಿಗೆ ಬಂದಿತ್ತು.
ಈ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ನಾಲ್ವರು ಪೇದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಡಾ.ಅರುಣ್ ಕೆ. ಮಾಹಿತಿ ನೀಡಿದ್ದಾರೆ.
ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್: ಮುಂದಿನ ವರ್ಷವೇ ದೇವಿಯ ದರ್ಶನ ಸಿಗೋದು