More

    ಅಯೋಧ್ಯೆಯಲ್ಲಿಯೂ ಆತ್ಮಹತ್ಯಾ ದಾಳಿಗೆ ಸಂಚು; ಐಸಿಸ್​ ಉಗ್ರನ ಬಂಧನದಿಂದ ಬಯಲಾಯ್ತು ಸತ್ಯ…!

    ನವದೆಹಲಿ: ದೆಹಲಿ ಪೊಲೀಸರು ಬಂಧಿಸಿರುವ ಉತ್ತರಪ್ರದೇಶದ ಐಸಿಸ್​ ಉಗ್ರ ಹಲವು ಸ್ಫೋಟಕ ಸತ್ಯಗಳನ್ನು ಬಯಲು ಮಾಡಿದ್ದಾನೆ. ದೆಹಲಿ ಮಾತ್ರವಲ್ಲದೇ, ಅಯೋಧ್ಯೆ ಕೂಡ ಈತನ ಹಿಟ್​ ಲಿಸ್ಟ್​ನಲ್ಲಿತ್ತು.

    ಬಂಧಿತ ಉಗ್ರ ಮಹಮ್ಮದ್​ ಮುಷ್ತಕೀಮ್​ ದೆಹಲಿಯ ಹಲವು ಜನನಿಬಿಡ ಪ್ರದೇಶಗಳಲ್ಲಿ ಏಕಾಂಗಿ ಬಾಂಬ್​ ಸ್ಫೋಟಿಸುವ ಸಂಚು ರೂಪಿಸಿದ್ದ. ಅದಕ್ಕಾಗಿ ಸ್ಫೋಟಕಗಳನ್ನು ಸಿದ್ಧಪಡಿಸಿದ್ದ. ಮಾತ್ರವಲ್ಲದೇ, ಉತ್ತರಪ್ರದೇಶದ ಬಲರಾಮ್​ಪುರದ ಮನೆಯಲ್ಲಿ ಏರ್​ಗನ್​ನಿಂದ ನಿತ್ಯ ಪ್ರ್ಯಾಕ್ಟಿಸ್​ ಮಾಡುತ್ತಿದ್ದ.

    ಇದನ್ನೂ ಓದಿ; ದಾವೂದ್​ ತನ್ನ ನೆಲದಲ್ಲಿಯೇ ಇದ್ದಾನೆಂದು ಒಪ್ಪಿಕೊಂಡ ಪಾಕ್​; ಆರ್ಥಿಕ ದಿಗ್ಬಂಧನದಿಂದ ಪಾರಾಗಲು ತಂತ್ರ…? 

    ಇತ್ತೀಚೆಗಷ್ಟೇ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾದ ಅಯೋಧ್ಯೆಯಲ್ಲಿಯೂ ಭಾರಿ ವಿದ್ವಂಸಕ ಕೃತ್ಯ ನಡೆಸುವುದ ಕೂಡ ಈತನ ಉದ್ದೇಶವಾಗಿತ್ತು ಎಂಬುದು ಕೂಡ ಬಯಲಾಗಿದೆ.

    ದೆಹಲಿಯ ಕರೊಲ್​ ಬಾಗ್​ ಪ್ರದೇಶದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಸ್ಫೋಟಕವಾಗಿ ಬಳಸಲು ಇಟ್ಟಿದ್ದ ಎರಡು ಪ್ರೆಷರ್​ ಕುಕರ್​, 15 ಕೆಜಿಗಳಷ್ಟು ಸ್ಫೋಟಕ, ಪಿಸ್ತೂಲ್​, ನಾಲ್ಕು ಗುಂಡುಗಳನ್ನು ಈತನಿಂದ ವಶಪಡಿಸಿಕೊಳ್ಳಲಾಗಿತ್ತು.

    ಇದನ್ನೂ ಓದಿ; ಆತ್ಮಹತ್ಯಾ ದಾಳಿಗೆ ಸ್ಫೋಟಕಗಳಿದ್ದ ಬೆಲ್ಟ್​, ಜಾಕೆಟ್​ ಸಿದ್ಧಪಡಿಸಿದ್ದ ಐಸಿಸ್​ ಉಗ್ರ

    ಆತ್ಮಹತ್ಯಾ ದಾಳಿಗೆ ಬಳಸಲಾಗುವ ಸ್ಫೋಟಕವಿರಿಸುವ ಏಳು ಪಾಕೆಟ್​ಗಳಿರುವ ಎರಡು ಜಾಕೆಟ್​ಗಳು, ಮೂರು ಕೆಜಿ ಸ್ಫೋಟಕ ತುಂಬಿದ್ದ ನಡುಪಟ್ಟಿಗಳು ಪತ್ತೆಯಾಗಿದ್ದವು. ತಜ್ಞರು ಇದರಲ್ಲಿದ್ದ ಬಾಂಬ್​ಗಳನ್ನು ಸುರಕ್ಷಿತವಾಗಿ ಹೊರ ತೆಗೆದು ನಿಷ್ಕ್ರಿಯಗೊಳಿಸಲಾಗಿದೆ. ಒಟ್ಟಾರೆ 9 ಕೆಜಿ ಸ್ಫೋಟಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts