ಭಾರತ ಕಂಡ ಶ್ರೇಷ್ಠ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಅಗಲಿ ಆರು ತಿಂಗಳು ಗತಿಸಿವೆ. ದೈಹಿಕವಾಗಿ ಇಲ್ಲದಿದ್ದರೂ, ಸಾವಿರಾರು ಹಾಡುಗಳ ಮೂಲಕವೇ ಎಲ್ಲರ ನಡುವೆ ಜೀವಂತವಾಗಿದ್ದಾರೆ. ಇದೀಗ ಈ ದಂತಕತೆಯ ಜೀವನ ಆಧರಿಸಿ ಸಿನಿಮಾ ಮಾಡಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ! ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿಯೇ ಎಸ್ಪಿಬಿ ಬಯೋಪಿಕ್ ಮಾಡಲು ಪಕ್ಕದ ಕಾಲಿವುಡ್ನಲ್ಲಿ ಚರ್ಚೆಗಳು ನಡೆಯುತ್ತಿವೆ. ‘
ಇತ್ತೀಚೆಗಷ್ಟೇ ಚೆನ್ನೈನಲ್ಲಿ ಎಸ್ಪಿಬಿಗೆ ಗಾನ ನಮನ ಸಲ್ಲಿಸುವುದಕ್ಕಾಗಿ ಹೃದಯಾಂಜಲಿ ಎಂಬ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಲ್ಲಿ ಬಯೋಪಿಕ್ ಮಾಡುವ ಇಂಗಿತ ವ್ಯಕ್ತವಾಗಿದ್ದು, ಕುಟುಂಬದ ಒಪ್ಪಿಗೆ ಸಿಕ್ಕರೆ ಸಿನಿಮಾ ಮಾಡುವುದಾಗಿ ಶುಭೋದಯಂ ಸಂಸ್ಥೆ ಚೇರ್ವುನ್, ಉದ್ಯಮಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. –ಏಜೆನ್ಸೀಸ್
ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…
ಇದಿನ್ನೂ ಟ್ರೇಲರ್, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್!? ಈ ಭಾಗದ ಸಚಿವರ ಸಿಡಿ ರಿಲೀಸ್ ಆಗೋ ಸಾಧ್ಯತೆ!