More

    ಐಪಿಎಲ್​ನಿಂದ ಹೊರನಡೆದ ಸುರೇಶ್​ ರೈನಾ: ಸಿಎಸ್​ಕೆ ನೀಡಿದ ಕಾರಣ ಹೀಗಿದೆ…

    ನವದೆಹಲಿ: ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಉಪನಾಯಕ ಸುರೇಶ್​ ರೈನಾ ಪ್ರಸಕ್ತ ಸಾಲಿನ ಐಪಿಎಲ್​ ಟೂರ್ನಿಯಿಂದ ಹೊರ ನಡೆದಿರುವುದಾಗಿ ಸಿಎಸ್​ಕೆ ತಂಡ ಶನಿವಾರ ಮಾಹಿತಿ ಖಚಿತಪಡಿಸಿದೆ.

    ಈ ಬಗ್ಗೆ ಸಿಎಸ್​ಕೆ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹೇಳಿಕೆ ನೀಡಿರುವ ತಂಡದ ಸಿಇಒ ಕಾಸಿ ವಿಶ್ವನಾಥನ್​, ಸುರೇಶ್​ ರೈನಾ ಅವರು ಕೆಲ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ಮರಳಿ ಬರುತ್ತಿದ್ದು, ಪ್ರಸ್ತುತ ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ. ಈ ಸಂದರ್ಭದಲ್ಲಿ ರೈನಾರಿಗೆ ಮತ್ತು ಕುಟುಂಬಕ್ಕೆ ಚೆನ್ನೈ ಸೂಪರ್​​ ಕಿಂಗ್ಸ್​ ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.

    ಇದನ್ನೂ ಓದಿ: ಶವ ಪರೀಕ್ಷೆ ಯಾಕೆ ಮಾಡ್ಲಿಲ್ಲ?: ಇಂದ್ರಜಿತ್​ ಆರೋಪಕ್ಕೆ ತಿರುಗೇಟುಕೊಟ್ಟ ಚಿರು ಮಾವ

    ರೈನಾ ಅವರು ಆಗಸ್ಟ್​ 15ರಂದು ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಕರೊನಾ ಕಾರಣ ದುಬೈನಲ್ಲಿ ನಡೆಯಲಿರುವ ಐಪಿಎಲ್​ ಟೂರ್ನಿಗಾಗಿ ಆಗಸ್ಟ್​ 21ರಂದು ದುಬೈಗೆ ಹಾರಿದ್ದರು. ಬಿಸಿಸಿಐ ನಿಯಮದಂತೆ ಕ್ವಾರಂಟೈನ್​ನಲ್ಲಿದ್ದರು. ಇದೀಗ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಹೊರ ನಡೆದಿದ್ದಾರೆ. (ಏಜೆನ್ಸೀಸ್​)

    ಅನೈತಿಕ ಸಂಬಂಧ ಮುಂದುವರಿಸಲು ಒಪ್ಪದ ಚಿಕ್ಕಮ್ಮನ ಮೇಲೆ ಮಗನ ಅಟ್ಟಹಾಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts