ಬೆಂಗಳೂರು: ಈ ಕಾಲದಲ್ಲಿ ಹಣ, ಫೋನ್ ಅಥವಾ ಬೇರೆನಾದರೂ ದುಬಾರಿ ವಸ್ತುಗಳನ್ನು ಕಳೆದುಕೊಂಡರೆ ಅದು ನಮ್ಮ ಕೈಸೇರುವುದು ಕಷ್ಟನೇ. ಹಾಗೇ, ಸಿಕ್ಕಿದ್ದನ್ನು ತಮ್ಮದೆಂಬಂತೇ ಇಟ್ಟುಕೊಳ್ಳುವವರೇ ಹೆಚ್ಚು.
ಹೀಗಿರುವಾಗ ಇಲ್ಲೊಬ್ಬ ಕೂಲಿ ಕಾರ್ಮಿಕ ಪ್ರಾಮಾಣಿಕತೆ ಮೆರೆದಿದ್ದಾರೆ. ತಮಗೆ ಸಿಕ್ಕ ಐಫೋನ್ನ್ನು ಪೊಲೀಸ್ ಠಾಣೆಗೆ ಕೊಟ್ಟು, ಮತ್ತೆ ಅದರ ವಾರಸುದಾರರಿಗೆ ಸೇರುವಂತೆ ಮಾಡಿದ್ದಾರೆ.
ಕೂಲಿಕಾರ್ಮಿಕ ಲಕ್ಷ್ಮಣ್ ಎಂಬುವರು ಗಿರಿನಗರದ ರಾಮಚಂದ್ರಾಪುರ ಮಠದ ಬಳಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಅಲ್ಲಿ 60,000 ಬೆಲೆಯ ಐಫೋನ್ ಸಿಕ್ಕಿದೆ. ಅದನ್ನು ನೋಡಿದ ಲಕ್ಷ್ಮಣ್, ಕೂಡಲೇ ತೆಗೆದುಕೊಂಡು ಹೋಗಿ ಗಿರಿನಗರ ಠಾಣೆಗೆ ನೀಡಿದ್ದಾರೆ. ಐಫೋನ್ ಸಂತೋಷ್ ಎಂಬುವರಿಗೆ ಸೇರಿದ್ದಾಗಿತ್ತು.
ಗಿರಿನಗರ ಪೊಲೀಸರು ಲಕ್ಷ್ಮಣ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಅವರಿಗೆ ಹಾರ ಹಾಕಿ, ಶಾಲು ಹೊದೆಸಿ ಸನ್ಮಾನ ಮಾಡಿ ಕಳಿಸಿದ್ದಾರೆ. (ಏಜೆನ್ಸೀಸ್)