More

    ಐಫೋನ್​ ತಂದು ಠಾಣೆಗೆ ನೀಡಿದ ಪ್ರಾಮಾಣಿಕ ಕೂಲಿ ಕಾರ್ಮಿಕನಿಗೆ ಶಾಲು ಹೊದೆಸಿ ಸನ್ಮಾನ ಮಾಡಿದ ಪೊಲೀಸ್​

    ಬೆಂಗಳೂರು: ಈ ಕಾಲದಲ್ಲಿ ಹಣ, ಫೋನ್​ ಅಥವಾ ಬೇರೆನಾದರೂ ದುಬಾರಿ ವಸ್ತುಗಳನ್ನು ಕಳೆದುಕೊಂಡರೆ ಅದು ನಮ್ಮ ಕೈಸೇರುವುದು ಕಷ್ಟನೇ. ಹಾಗೇ, ಸಿಕ್ಕಿದ್ದನ್ನು ತಮ್ಮದೆಂಬಂತೇ ಇಟ್ಟುಕೊಳ್ಳುವವರೇ ಹೆಚ್ಚು.

    ಹೀಗಿರುವಾಗ ಇಲ್ಲೊಬ್ಬ ಕೂಲಿ ಕಾರ್ಮಿಕ ಪ್ರಾಮಾಣಿಕತೆ ಮೆರೆದಿದ್ದಾರೆ. ತಮಗೆ ಸಿಕ್ಕ ಐಫೋನ್​​ನ್ನು ಪೊಲೀಸ್​ ಠಾಣೆಗೆ ಕೊಟ್ಟು, ಮತ್ತೆ ಅದರ ವಾರಸುದಾರರಿಗೆ ಸೇರುವಂತೆ ಮಾಡಿದ್ದಾರೆ.

    ಕೂಲಿಕಾರ್ಮಿಕ ಲಕ್ಷ್ಮಣ್​ ಎಂಬುವರು ಗಿರಿನಗರದ ರಾಮಚಂದ್ರಾಪುರ ಮಠದ ಬಳಿ ನಡೆದುಕೊಂಡು ಹೋಗುತ್ತಿದ್ದರು.
    ಈ ವೇಳೆ ಅಲ್ಲಿ 60,000 ಬೆಲೆಯ ಐಫೋನ್​ ಸಿಕ್ಕಿದೆ. ಅದನ್ನು ನೋಡಿದ ಲಕ್ಷ್ಮಣ್​, ಕೂಡಲೇ ತೆಗೆದುಕೊಂಡು ಹೋಗಿ ಗಿರಿನಗರ ಠಾಣೆಗೆ ನೀಡಿದ್ದಾರೆ. ಐಫೋನ್ ಸಂತೋಷ್​ ಎಂಬುವರಿಗೆ ಸೇರಿದ್ದಾಗಿತ್ತು.

    ಗಿರಿನಗರ ಪೊಲೀಸರು ಲಕ್ಷ್ಮಣ್​ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ, ಅವರಿಗೆ ಹಾರ ಹಾಕಿ, ಶಾಲು ಹೊದೆಸಿ ಸನ್ಮಾನ ಮಾಡಿ ಕಳಿಸಿದ್ದಾರೆ. (ಏಜೆನ್ಸೀಸ್​)

    ನೋಟ್‌ ಮೇಲಿನ ವೈರಸ್‌ ಹೋಗಿಸಲು ಈ ದಂಪತಿ ಏನ್‌ ಮಾಡಿದ್ರು ನೋಡಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts