ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಅಯೋಧ್ಯೆಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ದಳಗಳು ಎಚ್ಚರಿಕೆ ನೀಡಿವೆ ಎಂದು ಉನ್ನತ ಮೂಲಗಳಿಂದ ವರದಿಯಾಗಿದೆ.
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯಲಿದೆ. ಹಾಗೇ ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ರದ್ದುಗೊಳಿಸಿ ಆ.5ಕ್ಕೆ ಒಂದು ವರ್ಷ ತುಂಬುತ್ತದೆ. ಹಾಗಾಗಿ ಅಂದು ಅಯೋಧ್ಯೆ ಮತ್ತು ಜಮ್ಮು-ಕಾಶ್ಮೀರ ಎರಡೂ ಕಡೆಗಳಲ್ಲಿ ಉಗ್ರದಾಳಿಯ ಸಂಭವ ಇದೆ ಎಂದು ಹೇಳಲಾಗಿದೆ.
ಪಾಕಿಸ್ತಾನಿ ಸೇನೆ ತರಬೇತಿ ನೀಡಿರುವ ಹಲವು ತಾಲಿಬಾನ್ ಉಗ್ರರು ಈ ದಾಳಿಗೆ ಹೊಂಚು ಹಾಕಿದ್ದಾರೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಕೆಎಫ್ಸಿ ಪಾದರಕ್ಷೆ ಬಿಡುಗಡೆ ಮಾಡಿದ ಕ್ರೋಕ್ಸ್; ನೋಡಲಷ್ಟೇ ಅಲ್ಲ, ವಾಸನೆಯೂ ಪಕ್ಕಾ ಫ್ರೈಡ್ ಚಿಕನ್ನಂತೆ !
ಅಷ್ಟೇ ಅಲ್ಲ ಸ್ವಾತಂತ್ರ್ಯೋತ್ಸವದಂದೂ ಉಗ್ರದಾಳಿಯಾಗುವ ಸಂಭವ ಇದೆ ಎಂದು ಹಿಂದೆಯೇ ಗುಪ್ತಚರ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಜಮ್ಮುಕಾಶ್ಮೀರ, ಅಯೋಧ್ಯೆ, ದೆಹಲಿಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕೂಡ ಈಗಾಗಲೇ ಬಿಜೆಪಿ ನಾಯಕರಿಗೆ ಬೆದರಿಕೆ ಹಾಕಿದೆ. (ಏಜೆನ್ಸೀಸ್)
ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್ಐಆರ್ ವಿವರ ಕೇಳಿದ ಜಾರಿ ನಿರ್ದೇಶನಾಲಯ